ಪುತ್ತೂರು: ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಪಿನಬಾಗಿಲು-ಅರಸಿನಮಕ್ಕಿ ರಸ್ತೆಯಲ್ಲಿರುವ ಹಂಸಗಿರಿ ಎಸ್ಟೇಟ್ ಬಳಿ ದ್ವಿಚಕ್ರ ವಾಹನಕ್ಕೆ ಕಾಡೆಮ್ಮೆ ಅಡ್ಡ ಬಂದ ಪರಿಣಾಮ ಸವಾರರು ಗಂಭೀರ ಗಾಯಗೊಂಡ ಘಟನೆ ಮೇ.31ರಂದು ರಾತ್ರಿ ನಡೆದಿದೆ.
ಕಳೆಂಜ ಗ್ರಾಮದ ಶಿಬರಾಜೆಯ ದಯಾನಂದ ಮತ್ತು ಚಿದಾನಂದ ಗಾಯಗೊಂಡವರು. ಗಾಯಾಳುಗಳನ್ನು ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.