ಹಿರೇಬಂಡಾಡಿ: ಅಲ್ಲಲ್ಲಿ ಧರೆ ಕುಸಿತ- ವಿದ್ಯುತ್ ಕಂಬಗಳಿಗೆ ಹಾನಿ

0

ಉಪ್ಪಿನಂಗಡಿ: ಶುಕ್ರವಾರ ಸಂಜೆಯ ಬಳಿಕ ಸುರಿದ ಮಳೆ ಮತ್ತು ಗಾಳಿಯ ಅಬ್ಬರಕ್ಕೆ ಹಿರೇಬಂಡಾಡಿ-ಕೊಯಿಲ ರಸ್ತೆಯಲ್ಲಿ ಅಲ್ಲಲ್ಲಿ ಧೆರೆ ಕುಸಿತವಾಗಿದ್ದು, ಧರೆಯ ಮಣ್ಣು ಮತ್ತು ಧರೆ ಅಂಚಿನಲ್ಲಿದ್ದ ಮರಗಳು ರಸ್ತೆಗೆ ಉರುಳಿ ಬಿದ್ದಿದೆ. ಹಾಗೂ ಬೃಹತ್ ಮರಗಳು ಮತ್ತು ವಿದ್ಯುತ್ ಕಂಬಗಳು ರಸ್ತೆ ತುಂಡಾಗಿ ರಸ್ತೆಗೆ ಅಡ್ಡವಾಗಿ ಬಿದ್ದಿರುವುದು ಕಂಡು ಬಂದಿದೆ.


ಉಪ್ಪಿನಂಗಡಿ-ಹಿರೇಬಂಡಾಡಿ-ಕೊಯಿಲ ರಸ್ತೆಯಲ್ಲಿ ನಿನ್ನಿಕಲ್ ಸಮೀಪ ಅರ್ತಿಲ ತಿರುಗುವಲ್ಲಿ ಧರೆ ಕುಸಿದು ರಸ್ತೆಗೆ ಬಿದ್ದಿದೆ, ಇದರ ಅಂಚಿನಲ್ಲಿದ್ದ ಮರಗಳು ರಸ್ತೆಗೆ ಅಡ್ಡವಾಗಿ ಬಿದ್ದಿದ್ದವು. ದಾಸರಮೂಲೆ ಸಮೀಪ ಸುಮಾರು 200 ಮೀಟರ್ ಉದ್ದಕ್ಕೂ ರಸ್ತೆಯ ಬದಿಯಲ್ಲಿ ಧರೆ ಕುಸಿದು ರಸ್ತೆಗೆ ಬಿದ್ದಿದೆ.

ಇದರೊಂದಿಗೆ ಧರೆ ಅಂಚಿನಲ್ಲಿದ್ದ ಮರಗಳು ಧರೆಶಾಹಿಯಾಗಿದೆ. ನೆಹರೂತೋಟ ಎಂಬಲ್ಲಿ 2 ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದ್ದು, ಅದರ ಸಮೀಪದಲ್ಲೇ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದು, ವಾಹನ ಸಂಚಾರಕ್ಕೂ ತಡೆ ಉಂಟಾಗಿತ್ತು.


ನೆಕ್ಕಿಲಾಡಿಯಲ್ಲಿ ಮನೆ ಮೇಲೆ ಗುಡ್ಡ ಕುಸಿತ:
ನೆಕ್ಕಿಲಾಡಿ ಗ್ರಾಮದ ಆದರ್ಶ ನಗರ ಎಂಬಲ್ಲಿ ಅಶೋಕ್ ಎಂಬವರ ಮನೆಯ ಮೇಲೆ ಮನೆ ಬಳಿ ಇದ್ದ ಗುಡ್ಡವೊಂದು ಜರಿದು ಬಿದ್ದಿದ್ದು, ಗುಡ್ಡದ ಮಣ್ಣು ಮನೆಯ ಒಳಗಡೆ ತುಂಬಿಕೊಂಡಿರುವದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here