ರಾಮಕುಂಜ ಗ್ರಾಮದ ವಿವಿಧೆಡೆ ಮಳೆಗೆ ಹಾನಿ

0

ರಾಮಕುಂಜ: ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ರಾಮಕುಂಜ ಗ್ರಾಮದ ವಿವಿಧ ಕಡೆಗಳಲ್ಲಿ ಹಾನಿ ಸಂಭವಿಸಿದೆ.
ಅಡ್ಕರೆಗುಂಡಿ ಗಂಗಾಧರ ಗೌಡರವರ ಕೊಟ್ಟಿಗೆ ಮೇಲೆ ಪಕ್ಕದ ಗುಡ್ಡ ಜರಿದು ಬಿದ್ದಿದೆ. ರಾಮಂಡ ನಿವಾಸಿ ಜಯಂತ ಎಂಬವರ ತೋಟದ ಪಕ್ಕದ ಗುಡ್ಡ ಜರಿದ ಪರಿಣಾಮ ೫೦ಕ್ಕೂ ಹೆಚ್ಚು ಅಡಿಕೆ ಮರ, ತೆಂಗಿನ ಮರ, ಬಾಳೆಗಿಡಗಳು ಹಾನಿಗೊಂಡಿವೆ. ಅಮೈ ನಿವಾಸಿ ಕೃಷ್ಣಪ್ಪ, ಪುತ್ತಬ್ಬ ಅವರ ಮನೆಗೆ ಪಕ್ಕದ ಗುಡ್ಡ ಜರಿದು ಬಿದ್ದಿದೆ. ಇದಲ್ಲದೆ ಗ್ರಾಮದ ವಿವಿಧ ಕಡೆಗಳಲ್ಲಿ ಮಳೆಗೆ ವ್ಯಾಪಕ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ. ಹಾನಿಯಾದ ಪ್ರದೇಶಗಳಿಗೆ ರಾಮಕುಂಜ ಗ್ರಾ.ಪಂ. ಅಧ್ಯಕ್ಷೆ ಸುಚೇತಾ, ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಪಿಡಿಒ ಮೋಹನ್‌ಕುಮಾರ್, ಕಾರ್ಯದರ್ಶಿ ಲಲಿತಾ ಜಿ.ಡಿ., ಸದಸ್ಯರು, ಗ್ರಾಮ ಸಹಾಯಕ ವೆಂಕಟೇಶ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here