





400 ಕ್ಕಿಂತಲೂ ಅಧಿಕ ಸ್ಪರ್ಧಿಗಳು, ಒಂದೂವರೆ ಲಕ್ಷಕ್ಕಿಂತಲೂ ಅಧಿಕ ನಗದು ಬಹುಮಾನ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾದ ಅರೇಮ್ಯ 2025 ಸ್ಪರ್ಧೆಯ ಸಮಾರೋಪ ಸಮಾರಂಭ ಶನಿವಾರ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಕೆ. ಬಹುಮಾನ ವಿತರಿಸಿದರು. ಬಹುಮಾನ ವಿತರಣಾ ವೇದಿಕೆಯಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್., ಬಪ್ಪಳಿಗೆ ಅಂಬಿಕಾ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ ಉಪಸ್ಥಿತರಿದ್ದರು. ಉಪನ್ಯಾಸಕ ಸುಬ್ರಹ್ಮಣ್ಯ ಭಟ್ ಬಹುಮಾನಿತರ ಪಟ್ಟಿ ವಾಚಿಸಿದರು.



ಬ್ರೈನ್ ಬಝ್ ಎಂಬ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಸಾತ್ವಿಕ್ ಕೃಷ್ಣ ಹಾಗೂ ಸರ್ವದ್ ಜೆ ನಾಯಕ್ ಪ್ರಥಮ, ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯ ಕೆ.ಪ್ರಣಮ್ಯಾ ರೈ ಹಾಗೂ ಸುಮಂತ್ ಎನ್. ದ್ವಿತೀಯ, ಬಪ್ಪಳಿಗೆ ಅಂಬಿಕಾ ವಿದ್ಯಾಲಯದ ಕನಿಷ್ಕ್ ಎಸ್.ಶೆಟ್ಟಿ ಹಾಗೂ ಪ್ರಿಯಾಂಶು ರಾವ್ ತಂಡ ತೃತೀಯ ಸ್ಥಾನ ಪಡೆದರು. ಟಾಕ್ ಟೈಟಾನ್ಸ್ ಎಂಬ ಸೆಮಿನಾರ್ ಸ್ಪರ್ಧೆಯಲ್ಲಿ ಅಂಬಿಕಾ ವಿದ್ಯಾಲಯದ ಮಂದಿರಾ ಕಜೆ ಪ್ರಥಮ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಅತೀತ್ ಎಚ್.ರೈ ದ್ವಿತೀಯ ಹಾಗೂ ವಿವೇಕಾನಂದ ಸೆಂಟ್ರಲ್ ಸ್ಕೂಲ್ನ ಸುದಿಕ್ಷಾ ಎಸ್.ಭಟ್ ತೃತೀಯ ಸ್ಥಾನ ಪಡೆದರು.





ಬ್ರಶ್ ಅಂಡ್ ಬ್ಲಶ್ ಎಂಬ ಪೈಂಟಿಂಗ್ ಸ್ಪರ್ಧೆಯಲ್ಲಿ ವಿಟ್ಲ ಜೇಸೀಸ್ ಸಂಸ್ಥೆಯ ಯಾನ್ವಿ ಹಾಗೂ ಸಾನ್ವಿ ತಂಡ ಪ್ರಥಮ ಸ್ಥಾನ ಪಡೆದರೆ, ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಸೋನಪೃಥ್ವಿ ಹಾಗೂ ಸಾನ್ವಿ ತಂಡ ದ್ವಿತೀಯ ಸ್ಥಾನ ಗಳಿಸಿದರು. ನರಿಮೊಗರು ಸಾಂದೀಪನಿ ಸಂಸ್ಥೆಯ ವಾಹಿನಿ ರೈ ಹಾಗೂ ಅಜಿತೇಶ್ ಜೆ.ಎನ್. ತೃತೀಯ ಸ್ಥಾನ ಪಡೆದುಕೊಂಡರು. ಮಿಸರಿ ಚೇಸ್ ಎಂಬ ಟ್ರೆಶರ್ ಹಂಟ್ ಸ್ಪರ್ಧೆಯಲ್ಲಿ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಧನ್ವಿ ಡಿ ಶೆಟ್ಟಿ ತಂಡ ಪ್ರಥಮ, ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಪ್ರಮತ್ ಕಾರ್ತಿಕ್ ತಂಡ ದ್ವಿತೀಯ ಹಾಗೂ ವಿವೇಕಾನಂದ ಸೆಂಟ್ರಲ್ ಸ್ಕೂಲ್ನ ಅರುಶ್ ಹಾಗೂ ತಂಡ ತೃತೀಯ ಸ್ಥಾನ ಪಡೆದರು.
ವಾಯ್ಸ್ ಅಂಡ್ ವರ್ಡಿಕ್ಟ್ ಎಂಬ ಚರ್ಚಾ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಅಮೃತ ರಶ್ಮಿ ಹಾಗೂ ದೀಪ್ತಿ ಕುಬಣೂರಾಯ ಪ್ರಥಮ, ಇಂದ್ರಪ್ರಸ್ಥ ವಿದ್ಯಾಲಯದ ಸಿಂಚನಾ ಭಟ್ ಹಾಗೂ ಅಕ್ಷಾ ಬಿ. ದ್ವಿತೀಯ, ಬಾಲವಿಕಾಸ ವಸತಿ ಶಾಲೆಯ ಪ್ರಗತಿ ಆರ್. ಸಾಲಿಯಾನ್ ಹಾಗೂ ನಿಧಿಶಾ ತಂಡ ತೃತೀಯ ಸ್ಥಾನ ಪಡೆದರು. ಲಾಂಚಾ ಪ್ಯಾಡ್ ಅನ್ನುವ ಪ್ರಾಡಕ್ಟ್ ಪ್ರಸ್ತುತಿ ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲಿನ ವೇದಿಕಾಶ್ರೀ ಭಟ್ ಹಾಗೂ ತಂಡ ಪ್ರಥಮ, ಬಾಲವಿಕಾಸ ವಸತಿ ಶಾಲೆಯ ಪೂರ್ವಿ ಎ. ಭಾರದ್ವಾಜ್ ಹಾಗೂ ತಂಡ ದ್ವಿತೀಯ, ಇಂದ್ರಪ್ರಸ್ಥ ವಿದ್ಯಾಲಯದ ಅವಿತಾ ಶೆಟ್ಟಿ ಹಾಗೂ ತಂಡ ತೃತೀಯ ಸ್ಥಾನ ಪಡೆದರು.
ರಾಗ್ ರಂಗ್ ಎಂಬ ಭಾವಗೀತೆ ಸ್ಪರ್ಧೆಯಲ್ಲಿ ಅಂಬಿಕಾ ವಿದ್ಯಾಲಯದ ಸನ್ಮಯ್ ಎನ್. ಪ್ರಥಮ, ಇಂದ್ರಪ್ರಸ್ಥ ವಿದ್ಯಾಲಯದ ಆದ್ಯ ದ್ವಿತೀಯ ಹಾಗೂ ವಿವೇಕಾನಂದ ಸೆಂಟ್ರಲ್ ಸ್ಕೂಲ್ನ ಮಾನ್ವಿ ಕಜೆ ತೃತೀಯ ಸ್ಥಾನ ಗಳಿಸಿಕೊಂಡರು. ರೂಟ್ಸ್ ಅಂಡ್ ರಿದಮ್ಸ್ ಎಂಬ ಜಾನಪದ ನೃತ್ಯ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವೈಷ್ಣವಿ ಹಾಗೂ ತಂಡ ಪ್ರಥಮ, ಶ್ರೀ ಭಾರತೀ ಇಂಗ್ಲಿಷ್ ಮಾಧ್ಯಮ ಶಾಲೆಯ ಸಾದ್ವಿ ಶೆಟ್ಟಿ ಹಾಗೂ ತಂಡ ದ್ವಿತೀಯ ಮತ್ತು ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಶಾಲೆಯ ಧೃವಿ ಹಾಗೂ ತಂಡ ತೃತೀಯ ಸ್ಥಾನ ಪಡೆದರು.
ಗೀತಾಮೃತಂ ಎಂಬ ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಕುಂದ ಪ್ರಥಮ, ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಶಾಲೆಯ ನಾಗಭೂಷಣ ಕಿಣಿ ದ್ವಿತೀಯ, ವಿವೇಕಾನಂದ ಸೆಂಟ್ರಲ್ ಸ್ಕೂಲ್ನ ಅವನಿ ಶಂಕರ ತೃತೀಯ ಸ್ಥಾನ ಪಡೆದುಕೊಂಡರು. ಹೆರಿಟೇಜ್ ವಾಲ್ ಆರ್ಟ್ ಎಂಬ ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ದ್ವಿಜನ್ ಹಾಗೂ ಅದ್ವಿತ್ ಜಿ. ಪ್ರಥಮ, ಅಂಬಿಕಾ ವಿದ್ಯಾಲಯದ ಇಶಾನಿ ಭಟ್ ಹಾಗೂ ಲಾಸ್ಯ ಸಂತೋಷ್ ದ್ವಿತೀಯ ಹಾಗೂ ಬಾಲವಿಕಾಸ ವಸತಿ ಶಾಲೆಯ ಸಿಂಚನ್ ಹಾಗೂ ಕಾತಿಕ್ ಜಿ.ಕೆ. ತೃತೀಯ ಸ್ಥಾನ ಗಳಿಸಿದರು.
ಇಕೋ ರಂಗೋಲಿ ಎಂಬ ರಂಗೋಲಿ ಸ್ಪರ್ಧೆಯಲ್ಲಿ ಸಾಂದೀಪನಿ ಇಂಗ್ಲಿಷ್ ಮಾಧ್ಯಮ ಶಾಲೆಯ ಸೌಂದರ್ಯ, ಪ್ರಾಪ್ತಿ ಪುತ್ತಿಲ ಮತ್ತು ಸಿಂಚನಾ ಕುಮಾರಿ ತಂಡ ಪ್ರಥಮ, ಬಾಲವಿಕಾಸ ವಸತಿ ಶಾಲೆಯ ಕೃತಿ, ವೈಭವಿ ಜಿ., ಸಾನ್ವಿ ವಿ. ಬಂಗೇರ ದ್ವಿತೀಯ ಹಾಗೂ ಶ್ರೀ ಭಾರತೀ ಇಂಗ್ಲಿಷ್ ಮಾಧ್ಯಮ ಶಾಲೆಯ ಪೂಜಿತಾ ಎಂ., ಪಾತಿಮತ್ ಶಾಝ್ನಾ ಮತ್ತು ಇಂಚರಾ ತೃತೀಯ ಸ್ಥಾನ ಗಳಿಸಿದರು. ಮೋನೋಲಾಗ್ ಎಂಬ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಸಾಂದೀಪನಿ ಇಂಗ್ಲಿಷ್ ಮಾಧ್ಯಮ ಶಾಲೆಯ ಧ್ಯಾನ್ ರೈ ಪ್ರಥಮ, ಬಾಲವಿಕಾಸ ವಸತಿ ಶಾಲೆಯ ದಿಶಾ ಕೆ. ಪೂಜಾರಿ ದ್ವಿತೀಯ, ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಶಾಲೆಯ ಶ್ರೀರಂಜಿನಿ ತೃತೀಯ ಸ್ಥಾನ ಪಡೆದರು.
ಸ್ನಾಪ್ ಸ್ಟೋರಿ ಎಂಬ ವೀಡಿಯೋ ಎಡಿಟಿಂಗ್ ಸ್ಪರ್ಧೆಯಲ್ಲಿ ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಶಾಲೆಯ ಘನಶ್ಯಾಮ್ ಹಾಗೂ ಕೌಶಿಕ್ ತಂಡ ಪ್ರಥಮ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿನಿಲ್ ವಿಶ್ವಕರ್ಮ ಹಾಗೂ ಮನೀಶ್ ತಂಡ ದ್ವಿತೀಯ ಹಾಗೂ ವಿಟ್ಲ ಜೇಸೀಸ್ ಶಾಲೆಯ ಶಾಶ್ವತ್ ರೈ ಹಾಗೂ ಚಮನ್ ಸತೀಶ್ ತಂಡ ತೃತೀಯ ಸ್ಥಾನ ಗಳಿಸಿದರು. ನೃತ್ಯ ವೈಭವಂ ಎಂಬ ಭರತನಾಟ್ಯ ಸ್ಪರ್ಧೆಯಲ್ಲಿ ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಶಾಲೆಯ ಕೀರ್ತನಾ ವರ್ಮ ಪ್ರಥಮ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಲಾಸ್ಯ ಎನ್.ವಿ. ದ್ವಿತೀಯ, ಬಾಲವಿಕಾಸ ವಸತಿ ಶಾಲೆಯ ಸಂಜನಾ ಎಸ್. ಭಟ್ ತೃತೀಯ ಸ್ಥಾನ ಗಳಿಸಿದರು.
ಅರೇಮ್ಯ 2025ರಲ್ಲಿ 14 ಶಿಕ್ಷಣ ಸಂಸ್ಥೆಗಳಿಂದ 4೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರತಿ ಸ್ಪರ್ಧೆಯಲ್ಲೂ ಪ್ರಮಾಣ ಪತ್ರ ಹಾಗೂ ಟ್ರೋಫಿಗಳೊಂದಿಗೆ ಪ್ರಥಮ ಸ್ಥಾನಕ್ಕೆ ರೂಪಾಯಿ ನಾಲ್ಕು ಸಾವಿರ, ದ್ವಿತೀಯ ಸ್ಥಾನಕ್ಕೆ ಮೂರು ಸಾವಿರ ಹಾಗೂ ತೃತೀಯ ಸ್ಥಾನಕ್ಕೆ ಎರಡು ಸಾವಿರ ನಗದು ಬಹುಮಾನನ್ನು ನೀಡಲಾಯಿತು. ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಗೆ ಭಾಜನರಾದರೆ, ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡರು.





