

ಉಪ್ಪಿನಂಗಡಿ: ಶುಕ್ರವಾರ ಸಾಯಂಕಾಲದಿಂದ ಸುರಿದ ಭಾರೀ ಮಳೆಯ ಬಳಿಕ ಶನಿವಾರ ಮಳೆ ಕಡಿಮೆಯಾಗಿ ಬಿಸಿಲ ವಾತಾವರಣ ಇತ್ತಾದರೂ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡೂ ಮಣ್ಣು ಮಿಶ್ರಿತ ನೀರಿನೊಂದಿಗೆ ಮೈತುಂಬಿ ಹರಿಯುತ್ತಿದ್ದು, ಅದರ ಸೊಬಗನ್ನು ಉಪ್ಪಿನಂಗಡಿ ಕಿರು ಸಾಕ್ಷ್ಯ ಚಿತ್ರ ನಿರ್ಮಾಪಕ ಅಚಲ್ ಉಬರಡ್ಕ್ ರವರು ತನ್ನ ಡ್ರೋನ್ ಕ್ಯಾಮರಾದ ಮೂಲಕ ಸೆರೆ ಹಿಡಿದು ಪತ್ರಿಕೆಗೆ ನೀಡಿದ್ದಾರೆ.
