ಪುತ್ತೂರು: ಪುತ್ತೂರು ಪಿಎಲ್ಡಿ ಬ್ಯಾಂಕ್ ವ್ಯವಸ್ಥಾಪಕ ಶೇಖರ್ ಎಂ.ರವರು ಮೇ.31 ರಂದು ಸೇವಾ ನಿವೃತ್ತಿಹೊಂದಿದ್ದು, ಅವರಿಗೆ ಬ್ಯಾಂಕಿನ ವತಿಯಿಂದ ಬೀಳ್ಕೊಡುಗೆ ಮತ್ತು ಸನ್ಮಾನ ನಡೆಯಿತು.

ಬ್ಯಾಂಕಿನ ಆಡಳಿತ ಸಮಿತಿ ಅಧ್ಯಕ್ಷ ಭಾಸ್ಕರ್ ಎಸ್ ಗೌಡರವರು ಅಧ್ಯಕ್ಷತೆ ವಹಿಸಿ, ಮಾತನಾಡಿ ಶೇಖರ್ ಎಂರವರು ಪಿಎಲ್ಡಿ ಬ್ಯಾಂಕಿನಲ್ಲಿ ಬಂಟ್ವಾಳ ಮತ್ತು ಪುತ್ತೂರಿನಲ್ಲಿ ಒಟ್ಟು 40 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿದ್ದಾರೆ. ಪುತ್ತೂರು ಪಿಎಲ್ಡಿ ಬ್ಯಾಂಕಿನ ವ್ಯವಸ್ಥಾಪಕರಾಗಿ, ಗ್ರಾಹಕರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳೊಂದಿಗೆ ಬಹಳ ಅನೋನ್ಯತೆಯಿಂದ ಕರ್ತವ್ಯವನ್ನು ನಿರ್ವಹಿಸಿ, ಜನಮಾನಸದಲ್ಲಿ ಹೆಸರನ್ನು ಪಡೆದಿದ್ದಾರೆ ಎಂದು ಹೇಳಿ, ನಿವೃತ್ತಿ ಜೀವನಕ್ಕೆ ಶುಭಕೋರಿದರು.
ರಾಜ್ಯ ಭೂ ಬ್ಯಾಂಕಿನ ಮಂಗಳೂರು ಶಾಖಾ ಕಚೇರಿಯ ಜಿಲ್ಲಾ ವ್ಯವಸ್ಥಾಪಕ ದಿಲೀಪ್ರವರು ಮಾತನಾಡಿ, ಪಿಎಲ್ಡಿ ಬ್ಯಾಂಕಿನ ವ್ಯವಸ್ಥಾಪಕರಾಗಿ ನಿವೃತ್ತರಾಗುತ್ತಿರುವ ಶೇಖರ್ ಎಂರವರು ಬ್ಯಾಂಕಿನಲ್ಲಿ ದಕ್ಷ ಅಧಿಕಾರಿಯಾಗಿ ಬಹಳ ಉತ್ತಮ ರೀತಿಯಿಂದ ಕರ್ತವ್ಯವನ್ನು ನಿರ್ವಹಿಸಿ, ಬ್ಯಾಂಕಿನ ಬೆಳವಣಿಗೆಗೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಶುಭಹಾರೈಸಿದರು. ಪಿಎಲ್ಡಿ ಬ್ಯಾಂಕಿನ ಮೂಲಕ ಬಹಳಷ್ಟು ಸೌಲಭ್ಯಗಳು ಇದೆ.ಇದನ್ನು ಸದುಪಯೋಗ ಪಡಿಸಿಕೊಂಡು,ಬ್ಯಾಂಕಿನ ಅಭಿವೃದ್ಧಿಗೆ ಸಹಕಾರವನ್ನು ನೀಡುವಂತೆ ವಿನಂತಿಸಿದರು.
ಸನ್ಮಾನ- ಬೀಳ್ಕೊಡುಗೆ
ಶೇಖರ್ ಎಂರವರನ್ನು ಬ್ಯಾಂಕಿನ ಆಡಳಿತ ಮಂಡಳಿ, ಸಿಬ್ಬಂಧಿಗಳ ವತಿಯಿಂದ ಸನ್ಮಾನಿಸಿ, ಬೀಳ್ಕೋಡುಗೆ ಮಾಡಲಾಯಿತು ಹಾಗೂ ರಾಜ್ಯ ಭೂ ಬ್ಯಾಂಕಿನ ಪರವಾಗಿ ಗೌರವಿಸಲಾಯಿತು. ಶೇಖರ್ರವರ ಪತ್ನಿ ಕೆನರಾ ಬ್ಯಾಂಕಿನ ಬಂಟ್ವಾಳ ಶಾಳೆಯ ಉದ್ಯೋಗಿ ಭವಾನಿ, ಪುತ್ರಿ ಅವನಿಯರನ್ನು ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶೇಖರ್ ಎಂರವರು ಸಂದಬೋಚಿತವಾಗಿ ಮಾತನಾಡಿದರು. ಬ್ಯಾಂಕಿನ ಉಪಾಧ್ಯಕ್ಷ ಪ್ರವೀಣ್ ರೈ ಪಂಜೊಟ್ಟು, ನಿರ್ದೇಶಕರುಗಳಾದ ಸುಜಾತ ರಂಜನ್ ರೈ, ಯತೀಂದ್ರ ಕೊಚ್ಚಿ, ವಿಕ್ರಮ್ ರೈ ಸಾಂತ್ಯ, ಸುಂದರ ಪೂಜಾರಿ ಬಡಾವು, ಚಂದ್ರಾವತಿ ಅಭಿಕಾರ್, ಸ್ವಾತಿ ರೈ, ಬಾಬು ಮುಗೇರ, ರಾಜು ಮೋನು, ಕುಶಾಲಪ್ಪ ಗೌಡ, ನಾರಾಯಣ ನಾಯ್ಕ, ಚೆನ್ನಕೇಶವರವರುಗಳು ಉಪಸ್ಥಿತರಿದ್ದರು. ಬ್ಯಾಂಕಿನ ನೂತನ ವ್ಯವಸ್ಥಾಪಕರಾದ ಸುಮನ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾಂಕಿನ ಕೋಶಾಧಿಕಾರಿ ಯುವರಾಜ್ ಪೆರಿಯತ್ತೋಡಿ ವಂದಿಸಿದರು. ಲೆಕ್ಕಾಧಿಕಾರಿ ವಿನಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.