ಪುತ್ತೂರು: ಪುತ್ತೂರು ಪಿಎಲ್ಡಿ ಬ್ಯಾಂಕಿನ ವ್ಯವಸ್ಥಾಪಕ ಶೇಖರ್ ಎಂರವರು ಮೇ.31 ರಂದು ಸೇವಾ ನಿವೃತ್ತಿ ಹೊಂದಿದರು. 1985ರಲ್ಲಿ ಪಿಎಲ್ಡಿ ಬ್ಯಾಂಕಿಗೆ ಉದ್ಯೋಗಿಯಾಗಿ ಸೇರ್ಪಡೆಯಾದ ಇವರು 2000 ರಲ್ಲಿ ಪುತ್ತೂರು ಪಿಎಲ್ಡಿ ಬ್ಯಾಂಕಿಗೆ ವರ್ಗವಣೆಗೊಂಡರು, ಬಳಿಕ 2012 ರಲ್ಲಿ ಬಂಟ್ವಾಳ ಪಿಎಲ್ಡಿ ಬ್ಯಾಂಕಿಗೆ ವರ್ಗಾವಣೆ ಹೊಂದಿದರು. ಬಳಿಕ 2021 ಕ್ಕೆ ಪುತ್ತೂರಿಗೆ ವರ್ಗಾವಣೆಗೊಂಡ ಇವರು 2022 ರಿಂದ ಪುತ್ತೂರು ಪಿಎಲ್ಡಿ ಬ್ಯಾಂಕಿನ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿದರು.
ಒಟ್ಟು 40 ವರ್ಷಗಳ ಕಾಲ ಬ್ಯಾಂಕಿನಲ್ಲಿ ಸೇವೆಸಲ್ಲಿಸಿದ್ದರು. ಶೇಖರ್ ಎಂರವರ ಪತ್ನಿ ಭವಾನಿರವರು ಬಂಟ್ವಾಳ ಕೆನರಾ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದು, ಮಕ್ಕಳಾದ ಅಕ್ಷಯ್ ಮತ್ತು ಅವನಿ ಅವರೊಂದಿಗೆ ಬಿ.ಸಿ.ರೋಡ್ ಸಂಚಯಗಿರಿ ಮನೆಯಲ್ಲಿ ವಾಸವಾಗಿದ್ದಾರೆ.