ಪುತ್ತೂರು: ಮೇ 19 ರಂದು ಅಗಲಿದ ನೆಲ್ಲಿಕಟ್ಟೆ ಅಮರ್ ಲೈಟಿಂಗ್ಸ್ ಮಾಲಕ ಎನ್.ರವೀಂದ್ರರವರ ಆತ್ಮ ಸದ್ಗತಿ ಬಗ್ಗೆ ಶ್ರದ್ಧಾಂಜಲಿ ಕಾರ್ಯವು ಜೂ.1 ರಂದು ಅಪರಾಹ್ನ ಉಪ್ಪಿನಂಗಡಿ ರಥಬೀದಿಯ ಶ್ರೀ ಶಕ್ತಿ ಸಭಾಂಗಣದಲ್ಲಿ ಜರಗಿತು.

ಅಗಲಿದ ರವೀಂದ್ರ ನೆಲ್ಲಿಕಟ್ಟೆರವರ ಪತ್ನಿ ರೇವತಿ, ಪುತ್ರಿ ಅಕ್ಷಯ ಎನ್, ಸಹೋದರ ಎನ್. ಗಂಗಾಧರ, ಅತ್ತಿಗೆ ಜಯಲಕ್ಷ್ಮಿ ಸಹಿತ ಕುಟುಂಬಿಕರು, ಹಿತೈಷಿಗಳು ಜೊತೆಗೆ ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ನಗರಸಭಾ ಸದಸ್ಯ ರಮೇಶ್ ರೈ, ದಾಮೋದರ್ ಭಂಡಾರ್ಕರ್, ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್, ನಯನಾ ರೈ ನೆಲ್ಲಿಕಟ್ಟೆ, ಸ್ಯಾಕ್ಸೋಫೋನ್ ಪಿ.ಕೆ ಗಣೇಶ್, ಮಾಧವ ಮಾವೆ ಸಾಲೆತ್ತೂರು, ಹೆರಿ ಡಾಯಸ್ ಕಲ್ಲಿಮಾರು, ಸೂತ್ರಬೆಟ್ಟು ಜಗನ್ನಾಥ ರೈ, ಅಭಿಮಾನ್ ಬಾರ್ & ರೆಸ್ಟೋರೆಂಟ್ ನ ಅಭಿಜಿತ್ ಶೆಟ್ಟಿ, ಜೆಬಿ ಲೈಟ್ಸ್ ಆಂಡ್ ಸೌಂಡ್ಸ್ ನ ರವಿ, ನಿಹಾ ಸೌಂಡ್ಸ್ ಆಂಡ್ ಲೈಟ್ಸ್ ನ ಪವನ್ ರಾಜ್, ಬಲ್ನಾಡು ಬಾಲಾಜಿ ಲೈಟಿಂಗ್ಸ್ ನ ಸೀತಾರಾಮ, ಮೋನಪ್ಪ ಎಸ್ ಪುಣಚ, ದಿನೇಶ್ ಕರ್ಕೇರಾ ಕೋಲಾಡಿ, ಶಾಂತಿಗೋಡು ಓಂಕಾರ್ ಧ್ವನಿ ಮತ್ತು ಬೆಳಕು ಮಾಲಕ ಚಂದ್ರಶೇಖರ, ಹಮೀದ್ ವಿಟ್ಲ, ವಿಟ್ಲ ಮುನ್ನಾ ಸೌಂಡ್ಸ್ & ಲೈಟ್ಸ್ ಮಾಲಕರು ಹಾಗೂ ಸಿಬ್ಬಂದಿ, ಪ್ರಕಾಶ್ ಶಿಂಗಾಣಿ, ಸುಧಾಕರ್ ತೆಂಕಿಲ, ನೆಲ್ಲಿಕಟ್ಟೆ ಅಮರ್ ಲೈಟಿಂಗ್ಸ್ ನ ಚಾಲಕ ಮಂಜುನಾಥ ಮುಂಡೂರು, ಪ್ರಸಾದ್ ನೆಲ್ಲಿಕಟ್ಟೆ, ಎಪಿಎಂಸಿ ಸುಪ್ರೀಂ ಸರ್ವೀಸಸ್ ಮಾಲಕ ಸಿಪ್ರಿಯಾನ್ ಮೊರಾಸ್, ರೂಪೇಶ್ ನಾಯ್ಕ(ಜೀತು), ನಂದ ಕಲ್ಲರ್ಪೆ, ಹೇಮಂತ್(ಮಾಸ್ಟರ್) ತಾರಿಗುಡ್ಡೆ, ಐವನ್ ಹಾರಾಡಿ, ಧನು ಕೆಮ್ಮಾಯಿ, ಸ್ಟೀವನ್ ಹಾರಾಡಿ, ಅಶ್ವಥ್ ಲೈಟಿಂಗ್ಸ್ ನ ಜನಾರ್ದನ ಕೆಮ್ಮಾಯಿ, ವಿಲಿಯಂ ನೆಲ್ಲಿಕಟ್ಟೆ, ಡಿ.ಜಿ ಮೆಕ್ಯಾನಿಕ್ ಹರಿಪ್ರಸಾದ್, ರಾಘವೇಂದ್ರ ಸಹಿತ ಹಲವರು ಕಾರ್ಯಕ್ರಮಕ್ಕೆ ಹಾಜರಾಗಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.