ಪದಡ್ಕ: ಬಡಗನ್ನೂರು ಪದಡ್ಕ ನಿವಾಸಿಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದ ದಿ.ಅಬ್ದುಲ್ ರಹಿಮಾನ್ ಎಂಬವರ ಪುತ್ರ ಅಬ್ದುಲ್ಲ ಪದಡ್ಕ ಅಲ್ಪಕಾಲದ ಅನಾರೋಗ್ಯದಿಂದ ಕಳೆದ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಮೃತಶರೀರವನ್ನು ಇಂದು ಬೆಳಿಗ್ಗೆ ಪದಡ್ಕ ಮನೆಗೆ ತರಲಾಗಿದ್ದು ಪಮ್ಮಲೆ ಜುಮಾ ಮಸೀದಿಯ ದಫನ ಭೂಮಿಯಲ್ಲಿ ದಫನಕಾರ್ಯ ನಡೆಯಲಿದೆ.
ಮೃತರು ಪತ್ನಿ, ಮಕ್ಕಳು, ಸಹೋದರರಾದ ಸಲಾಂ, ಸಂಶುದ್ದೀನ್ ಹಾಗೂ ಸಹೋದರಿಯರು ಅಳಿಯಂದಿರು ಮತ್ತು ಅನೇಕ ಬಂಧು ಬಳಗವನ್ನು ಅಗಲಿದ್ದಾರೆ.