ತೆಗ್ಗು ಸ್ನೇಹ ಫ್ರೆಂಡ್ಸ್ ಕ್ಲಬ್‌ನಿಂದ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವು

0

ಪುತ್ತೂರು: ಮಳೆಗಾಲದ ಸಮಯದಲ್ಲಿ ಹೆಚ್ಚಾಗಿ ಮರ ಹಾಗೂ ಮರದ ಗೆಲ್ಲುಗಳಿಂದಲೇ ವಿದ್ಯುತ್ ತಂತಿಗಳಿಗೆ ಹಾಗೂ ಕಂಬಗಳಿಗೆ ಹಾನಿಯುಂಟಾಗುತ್ತಿದ್ದ ಈ ಬಗ್ಗೆ ಕೆಯ್ಯೂರು ಗ್ರಾಮದ ತೆಗ್ಗು ಸ್ನೇಹ ಫ್ರೆಂಡ್ಸ್ ಕ್ಲಬ್‌ನ ಸದಸ್ಯರುಗಳು ವಿದ್ಯುತ್ ತಂತಿಗಳಿಗೆ ಹಾನಿಯುಂಟು ಮಾಡಬಲ್ಲಂತಹ ಅಪಾಯಕಾರಿ ಮರದ ಗೆಲ್ಲುಗಳನ್ನು, ಪೊದೆ ಇತ್ಯಾದಿಗಳನ್ನು ಶ್ರಮದಾನದ ಮೂಲಕ ತೆರವುಗೊಳಿಸಿದರು.
ಕ್ಲಬ್‌ನ ಚಂದ್ರಶೇಖರ್ ಗೌಡ ನೆಲ್ಲಿಗುರಿಯವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು ನೆಲ್ಲಿಗುರಿ, ಕೋಡಂಬು ಹಾಗೂ ತೆಗ್ಗು ಮೂರು ಟ್ರಾನ್ಸ್‌ಫಾರ್ಮರ್‌ಗಳಿಗೆ ಸಂಬಂಧಪಟ್ಟಂತೆ ಎಚ್‌ಟಿ ಲೈನ್ ಹಾಗೂ ಇತರ ಲೈನ್‌ಗಳಿಗೆ ಅಪಾಯ ತರುವಂತಹ ಪೊದೆ, ಮರದ ಗೆಲ್ಲುಗಳನ್ನು ತೆರವು ಮಾಡಲಾಯಿತು.

ಈ ಸಂದರ್ಭದಲ್ಲಿ ಪವರ್‌ಮ್ಯಾನ್‌ಗಳಾದ ದೇವೇಂದ್ರ, ರಾಜೇಂದ್ರ, ಪಿಕ್‌ಅಪ್ ಚಾಲಕ ಮೋನಪ್ಪ ಪೂಜಾರಿ ಹಾಗೇ ಸ್ನೇಗ ಫ್ರೆಂಡ್ಸ್ ಕ್ಲಬ್‌ನ ಕೃಷ್ಣಪ್ಪ ಗೌಡ ಕಲ್ಲಗುಡ್ಡೆ, ಬೆಳಿಯಪ್ಪ ಗೌಡ ಎರೆಬೈಲು, ಎಸ್.ಕುಶಾಲಪ್ಪ ತೆಗ್ಗು, ಶುಭಪ್ರಕಾಶ್ ಎರಬೈಲು, ದಿನೇಶ್ ಕುಮಾರ್ ತೆಗ್ಗು, ಖಲಂದರ್ ಶಾ ಎರಬೈಲು, ಖಲಂದರ್ ಶಾಫಿ ಎರಬೈಲು,ಉಮ್ಮರ್ ನೆಲ್ಲಿಗುರಿ,ಮಿಥುನ್ ಗೌಡ ನೆಲ್ಲಿಗುರಿ,ಕುಶಾಂತ್ ಎರಬೈಲ್, ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here