ಕ್ರಿಮಿನಲ್ ಹಿನ್ನಲೆಯೂ ಇಲ್ಲ……..ರೌಡಿಶೀಟರ್ ಕೂಡ ಅಲ್ಲ…………ಆದರೂ…… ಶಾಂತಿನಗರದಲ್ಲಿ ಮಧ್ಯರಾತ್ರಿ ಯು.ಜಿ. ರಾಧರವರ ಮನೆಗೆ ಬಂದ ಪೊಲೀಸರು!

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಶಾಂತಿನಗರ ನಿವಾಸಿ ಯು.ಜಿ.ರಾಧರವರ ಮನೆಗೆ ಮಧ್ಯರಾತ್ರಿ ವೇಳೆ ಪೊಲೀಸರು ಆಗಮಿಸಿ ಫೊಟೋ ತೆಗೆದುಕೊಂಡ ಹೋದ ಅಚ್ಚರಿಯ ಘಟನೆ ವರದಿಯಾಗಿದೆ.

34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಪ್ರಸ್ತುತ ಹಿರಿಯ ಮೊಕ್ತೇಸರರಾಗಿ ಕಾರ್ಯ ನಿರ್ವಹಿಸುತ್ತಿರುವ ಯು.ಜಿ.ರಾಧ ಅವರು ಉಪ್ಪಿನಂಗಡಿಯ ವೇದಶಂಕರನಗರದಲ್ಲಿರುವ ಶ್ರೀರಾಮ ಶಾಲೆಯ ಸಂಚಾಲಕರಾಗಿಯೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉಪ್ಪಿನಂಗಡಿಯ ಹಳೆ ಬಸ್ ನಿಲ್ದಾಣದ ಬಳಿ ಇರುವ ಕೈಲಾರ್ ಮೆಡಿಕಲ್ಸ್‌ನ ಮಾಲಕರೂ ಆಗಿರುವ ಯು.ಜಿ. ರಾಧ ಅವರು ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದಾರೆ. ಅವರು ಯಾವುದೇ ಕ್ರಿಮಿನಲ್ ಹಿನ್ನಲೆ ಹೊಂದಿಲ್ಲ. ಅವರ ಹೆಸರು ರೌಡಿ ಪಟ್ಟಿಯಲ್ಲಿಯೂ ಇಲ್ಲ. ಆದರೂ ಪೊಲೀಸರು ಮಧ್ಯರಾತ್ರಿ ವೇಳೆ ಮನೆ ಬಾಗಿಲು ಬಡಿದು ಫೋಟೋ ತೆಗೆಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ಘಟನೆ ಹೀಗೆ ನಡೆಯಿತು:
ಜೂನ್ 1ರಂದು ರಾತ್ರಿ ಸುಮಾರು 9:30ರ ವೇಳೆಗೆ ಪೊಲೀಸರು ಉಪ್ಪಿನಂಗಡಿಯ ಹಳೆ ಬಸ್ ನಿಲ್ದಾಣದ ಬಳಿಯ ಕೈಲಾರ್ ಮೆಡಿಕಲ್ ಶಾಪ್‌ಗೆ ಬಂದಿದ್ದರು. ಯು.ಜಿ.ರಾಧ ಅವರಲ್ಲಿ ಈ ವೇಳೆ ಮಾತನಾಡಿದ ಪೊಲೀಸರು ನಿಮ್ಮ ಜೊತೆ ನಿಂತು ಪೋಟೋ ತೆಗೆದು ನಮಗೆ ಅಪ್ಲೋಡ್ ಮಾಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್ಡರ್ ಮಾಡಿದ್ದಾರೆ ಎಂದು ತಿಳಿಸಿದ್ದರು. ಬಳಿಕ ಪೊಲಿಸರು ಒಟ್ಟಿಗೇ ನಿಂತು ಯು. ಜಿ.ರಾಧ ಅವರ ಫೋಟೋ ತೆಗೆದರು. ನಂತರ ಈ ಪ್ರೊಸಿಜರ್ ಯಾಕೆ ಎಂದು ರಾಧ ಅವರು ಕೇಳಿದಾಗ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ರೌಡಿಶೀಟರ್ ಹಾಗೂ ಧಾರ್ಮಿಕ ಮುಖಂಡರು ಇರುವ ಲೊಕೇಶನ್ ಮತ್ತು ಫೋಟೋವನ್ನು ಒಂದು ವಾರಗಳ ಕಾಲ ಅಪ್ಲೋಡ್ ಮಾಡಬೇಕು ಎಂಬ ಆದೇಶ ಇದೆ ಎಂದು ಪೊಲೀಸರು ತಿಳಿಸಿದ್ದರು.

ಮಾರನೇ ದಿನ ರಾತ್ರಿ ಮೆಡಿಕಲ್ ಬಂದ್ ಮಾಡಿ ಯು.ಜಿ. ರಾಧ ಅವರು ಮನೆಗೆ ಬಂದಿದ್ದರು. ರಾತ್ರಿ 11.30ರ ವೇಳೆಗೆ ಊಟ ಮಾಡಿ ಮಲಗುವ ಸಮಯಕ್ಕೆ ಪೊಲೀಸರು ಯು.ಜಿ. ರಾಧ ಅವರಿಗೆ ಕಾಲ್ ಮಾಡಿ ನೀವು ಯು.ಜಿ. ರಾಧಾ ಅಲ್ವಾ. ನೀವು ಎಲ್ಲಿದ್ದೀರಿ. ನಿಮ್ಮ ಫೋಟೋ ತೆಗೆದು ಲೊಕೇಶನ್ ಅಪ್ಲೋಡ್ ಮಾಡಬೇಕು ಎಂದು ಹೇಳಿದ್ದರು. ನಾನು ಮನೆಯಲ್ಲಿದ್ದೇನೆ ಎಂದು ಯು.ಜಿ.ರಾಧ ಅವರು ಹೇಳಿದಾಗ ನಿಮ್ಮ ಮನೆಗೆ ಬರ್ತೇವೆ ಎಂದು ಹೇಳಿ ಮಧ್ಯರಾತ್ರಿ 12 ಗಂಟೆ ವೇಳೆಗೆ ಪೊಲೀಸರು ರಾಧ ಅವರ ಮನೆಗೆ ಬಂದರು. ಫೋಟೋ ತೆಗೆಯಲು ಪೊಲೀಸರು ಮುಂದಾದಾಗ ಈ ಬಗ್ಗೆ ಏನಾದರೂ ಆದೇಶ ಪ್ರತಿ ಇದೆಯಾ ಎಂದು ಯು.ಜಿ.ರಾಧ ಕೇಳಿದರು. ಆ ವೇಳೆ ಪೊಲೀಸರು ನಿಮಗೆ ಕೊಡಲು ಯಾವುದೇ ನೋಟಿಸ್ ಇಲ್ಲ. ಆದ್ರೆ ನಮಗೆ ಎಸ್ಪಿ ಆದೇಶ ಇದೆ ಎಂದು ಅವರಲ್ಲಿದ್ದ ಆರ್ಡರ್ ಕಾಪಿ ತೋರಿಸಿದರು. ಅದರಲ್ಲಿ ಯು.ಜಿ ರಾಧ-ಆರ್‌ಎಸ್‌ಎಸ್ ಎಂದು ಬರೆದಿತ್ತು. ನಂತರ ಫೋಟೋ ತೆಗೆದು ಪೊಲೀಸರು ತೆರಳಿದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯು.ಜಿ.ರಾಧ ಅವರು ಪೊಲೀಸ್ ವ್ಯವಸ್ಥೆಗಾಗಲೀ, ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಳ್ಳುವ ಕ್ರಮಗಳಿಗಾಗಲೀ ನಮ್ಮದು ಯಾವುದೇ ವಿರೋಧ ಇಲ್ಲ. ಯಾವ ಕ್ಷಣದಲ್ಲಿ ಪೊಲೀಸ್ ಠಾಣೆಗೆ ಕರೆದರೂ ನಾವು ಹೋಗುತ್ತೇವೆ. ಅಥವಾ ಪೊಲೀಸರೇ ಬಂದು ಫೋಟೋ ತೆಗೆದುಕೊಳ್ಳುವುದಕ್ಕೆ ಅಭ್ಯಂತರ ಇಲ್ಲ. ಆದರೆ, ಮಧ್ಯರಾತ್ರಿ 12 ಗಂಟೆಗೆ ಮನೆಗೆ ಬಂದು ಯಾವುದೇ ಕ್ರಿಮಿನಲ್ ಹಿನ್ನಲೆ ಇಲ್ಲದೆ ಇರುವ ನಮ್ಮ ಮನೆಗೆ ಬಂದು ಲೊಕೇಶನ್ ಸಹಿತ ಫೋಟೋ ತೆಗೆದು ಅಪ್ಲೋಡ್ ಮಾಡುವುದು ಯಾಕೆ. ಯಾವುದೇ ನೋಟಿಸ್, ಆರ್ಡರ್ ಕಾಪಿ ಕೊಡದೆ ನೇರವಾಗಿ ಬಂದು ಮಹಿಳೆಯರು ಇರುವ ಮನೆಗೆ ಬಂದು ಯಾಕೆ ಫೋಟೋ ತೆಗೆಯಬೇಕು ಎಂದು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here