ಬಜತ್ತೂರು: ಗುಡ್ಡ ಕುಸಿದು ಮನೆಗೆ ಹಾನಿ, ಶೌರ್ಯ ತಂಡದಿಂದ ಮಣ್ಣು ತೆರವು

0

ನೆಲ್ಯಾಡಿ: ಮಳೆಗೆ ಮನೆ ಪಕ್ಕದ ಗುಡ್ಡ ಕುಸಿದು ಮಣ್ಣು ಮನೆಗೆ ಬಿದ್ದ ಪರಿಣಾಮ ಹಾನಿಯುಂಟಾದ ಘಟನೆ ಬಜತ್ತೂರಿನ ಮಣಿಕ್ಕಳದಲ್ಲಿ ನಡೆದಿದೆ.
ಮಣಿಕ್ಕಳ ನಿವಾಸಿ ಮನೋಜ್ ಎಂಬವರ ಮನೆಗೆ ಪಕ್ಕದ ಗುಡ್ಡ ಕುಸಿದು ಮಣ್ಣು ಮನೆಯ ಮೆಟ್ಟಿಲು ತನಕ ರಾಶಿ ಬಿದ್ದಿತ್ತು. ಮನೆಯ ಶೀಟುಗಳು ಕಳೆಕ್ಕೆ ಬಿದ್ದು ತುಂಡಾಗಿದ್ದವು. ಈ ವಿಚಾರ ಅರಿವಿಗೆ ಬರುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಜತ್ತೂರು ತಂಡದ ಸದಸ್ಯರು ಮಣ್ಣು ತೆರವು ಕಾರ್ಯ ನಡೆಸಿ ಹೆಚ್ಚಿನ ಅನಾಹುತ ಆಗದಂತೆ ಕ್ರಮಕೈಗೊಂಡರು. ತಂಡದ ಸ್ವಯಂ ಸೇವಕರಾದ ಸದಾನಂದ, ಮಮತ, ಮನೋಜ್, ರಾಜೇಶ್, ಸುರೇಶ್, ಸುಜಾತ, ಬೇಬಿ, ಇಂದಿರಾ, ಭವ್ಯ, ದಮಯಂತಿ ಅವರು ಮಣ್ಣು ತೆರವು ಕಾರ್ಯಾಚರಣೆಗೆ ಸಹಕರಿಸಿದರು.

LEAVE A REPLY

Please enter your comment!
Please enter your name here