ಅಮ್ಚಿನಡ್ಕ: ಮಾಡನ್ನೂರು ಗ್ರಾಮದ ಅಮ್ಚಿನಡ್ಕದ ಮುಖಾರಿಮೂಲೆಯಲ್ಲಿ ಎರಡು ಕಾಡನೆಗಳು ತೋಟಕ್ಕೆ ನುಗ್ಗಿ ಕೃಷಿ ಕೃಷಿನಾಶ ಮಾಡಿದ ಘಟನೆ ಜೂ.3ರ ರಾತ್ರಿ ನಡೆದಿದೆ.
ಇಸುಬು ಹಾಜಿ, ಬೀರಾ ಮೊೖದೀನ್, ಇಬ್ರಾಹಿಂ, ಹಸೈನರ್, ಅಬ್ದುಲ್ ರಜಾಕ್ ಮುಕಾರಿಮೂಲೆ ಇವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಕೃಷಿಯನ್ನು ಹಾಳುಗೆಡವಿ ತುಂಬಾ ನಷ್ಟವನ್ನುಂಟು ಮಾಡಿದೆ. ಈ ಪ್ರದೇಶಗಳಲ್ಲಿ ನಿರಂತರವಾಗಿ ಕಾಡಾನೆಯ ಹಾವಳಿ ನಡೆಯುತ್ತಿದ್ದು, ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಅಪಾಯ ಸಂಭವಿಸುವ ಮೊದಲು ಇದಕ್ಕೆ ಸೂಕ್ತ ಪರಿಹಾರ ಒದಗಿಸಿ ಆನೆಯನ್ನು ಹಿಡಿದು ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದರ ಬಗ್ಗೆ ಪುತ್ತೂರು ಶಾಸಕರಿಗೆ, ಅರಣ್ಯ ಇಲಾಖಾಧಿಕಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡುವುದಾಗಿ ಅಲ್ಲಿನ ಗ್ರಾಮಸ್ಥರು ತಿಳಿಸಿರುತ್ತಾರೆ.