ಪುತ್ತೂರು: ದರ್ಬೆ ಪಾಂಗಳಾಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.5ರಂದು ವಿಶ್ವ ಪರಿಸರ ದಿನಾಚರಣೆಯನ್ನು ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಅನಿತಾ ಟ್ರೆಸ್ಸಿ ಮಾತನಾಡಿ ವಿಶ್ವ ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ರಕ್ಷಕ–ಶಿಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಸಾಂಕೇತಿಕ ಆಚರಣೆಯಾಗದೆ ಪರಿಸರದ ಕುರಿತ ಪ್ರೀತಿ ಮತ್ತು ಜಾಗೃತಿ ನಿತ್ಯಾನುಷ್ಠಾನವಾಗಿರಬೇಕು ಎಂದರು.
ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಮಾತನಾಡಿ, ವಿಶ್ವ ಪರಿಸರ ದಿನಾಚರಣೆಯ ಆರಂಭದಿಂದ 2025ನೇ ವಿಶ್ವ ಪರಿಸರ ದಿನಾಚರಣೆಯವರೆಗೂ ನಡೆದ ಬಂದ ಹಾದಿಯ ಕುರಿತು ಮೆಲುಕು ಹಾಕಿದರು. ಶಾಲಾ ವಿದ್ಯಾರ್ಥಿಗಳಾದ ಮೊಹಮ್ಮದ್ ಅಲ್ಫಾನ್ ಸ್ವಾಗತಿಸಿದರು. ಸಾಕ್ಷಿ ಶೆಟ್ಟಿ ವಂದಿಸಿದರು. ಜೋಶ್ನಾ ಡಿ’ ಅಲ್ಮೇಡಾ ಮತ್ತು ಶ್ರೀನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.