ಪುತ್ತೂರು: ಕೆಪಿಎಸ್ ಶಾಲೆ ಕೆಯ್ಯೂರು ಪ್ರೌಢ ಶಾಲೆ ವಿಭಾಗದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ ಜಯಂತಿ ಉದ್ಘಾಟಿಸಿದರು.
ಉಪಪ್ರಾಂಶುಪಾಲ ವಿನೋದ್ ಪ್ರಾಸ್ತವಿಕವಾಗಿ ಮಾತನಾಡಿ ಮಕ್ಕಳಿಗೆ ಶಾಲೆಯ ಕುರಿತು ಹಾಗೂ ತರಗತಿಯ ಶಿಸ್ತುಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪ್ರಾಂಶುಪಾಲರು ಹಸೀನಾ ಬಾನು ಮಾತನಾಡಿ ಮೊದಲು ವಿದ್ಯೆಯನ್ನು ಗಳಿಸಿ, ವಿದ್ಯೆ ಇದ್ದರೆ ಮಾತ್ರ ಹಣ ಗಳಿಸಬಹುದು ಎಂಬ ಮಾತಿನೊಂದಿಗೆ ಶುಭಹಾರೈಸುವುದರ ಮೂಲಕ ಕಾರ್ಯಕ್ರಮದ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಶಾಲಾ ಪ್ರಾರಂಭೋತ್ಸವದ ಮೊದಲ ದಿನವೆ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಗ್ರಾಮ ಪಂಚಾಯತ್ ನ ಸದಸ್ಯರಾದ ಮೀನಾಕ್ಷಿ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಬಾಬು ಎಂ ರವರು, ಎಸ್.ಡಿಎಂಸಿ ಸದಸ್ಯ ಆಯುಬ್, ಶಾಲೆಯ ಸಹ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಸಹಾಯಕರು, ಅಕ್ಷರದಾಸೋಹ ಸಿಬ್ಬಂದಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ಮೌಲಿ ಸ್ವಾಗತಿಸಿ, ಸಹ ಶಿಕ್ಷಕಿ ಜಶಿ ಬಿ.ವಿ ನಿರೂಪಿಸಿ, ಸಹಶಿಕ್ಷಕ ಚಂದ್ರಶೇಖರ್ ವಂದಿಸಿದರು.