50 ಎಕ್ರೆ ಜಾಗವನ್ನು ಪೌಲ್ಟ್ರಿ ಫಾರಂ ಲೀಸ್‌ಗೆ ನೀಡುವಂತೆ ಪಶುಸಂಗೋಪನಾ ಸಚಿವರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಮನವಿ

0

ಒಂದು ಸಾವಿರ ಮಂದಿಗೆ ಉದ್ಯೋಗದ ಅವಕಾಶ: ಶಾಸಕ ಅಶೋಕ್ ರೈ

ಪುತ್ತೂರು: ಉಪ್ಪಿನಂಗಡಿಯ ಕೊಯಿಲದಲ್ಲಿ ಪಶು ಸಂಗೋಪನಾ ಇಲಾಖಾ ವ್ಯಾಪ್ತಿಯಲ್ಲಿರುವ ಭೂಮಿಯಲ್ಲಿ 50 ಎಕ್ರೆ ಜಾಗವನ್ನು ಪೌಲ್ಟ್ರಿ ಫಾರಂಗೆ ಲೀಸ್‌ಗೆ ನೀಡುವಂತೆ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಮನವಿ ಸಲ್ಲಿಸಿದ್ದಾರೆ.


ಗುರುವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಶಾಸಕರು. ಕೊಯಿಲದಲ್ಲಿ ಕಂಪೆನಿಯೊಂದು ಪೌಲ್ಟ್ರಿ ಫಾರಂ ಪ್ರಾರಂಭ ಮಾಡುವುದಾಗಿ ತಿಳಿಸಿದೆ. ಅವರಿಗೆ 50 ಎಕ್ರೆ ಜಾಗ ಬೇಕಾಗಿದೆ. ಪಶುಸಂಗೋಪನಾ ಇಲಾಖೆಯ ಅಧೀನದಲ್ಲಿ ಕೊಯಿಲದಲ್ಲಿರುವ ಜಾಗದಲ್ಲಿ ಕಂಪೆನಿಗೆ ಲೀಸ್‌ಗೆ ಜಾಗವನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಕಂಪೆನಿ ಸುಮಾರು 100 ಕೋಟಿ ರೂ ವೆಚ್ಚದಲ್ಲಿ ಉದ್ಯಮವನ್ನು ಪ್ರಾರಂಭ ಮಾಡಲಿದ್ದು ಇದರಿಂದ ಸ್ಥಳೀಯವಾಗಿ 1000 ಉದ್ಯೋಗವೂ ಸೃಷ್ಟಿಯಾಗಲಿದೆ ಎಂದು ಸಚಿವರಿಗೆ ಶಾಸಕರು ತಿಳಿಸಿದ್ದಾರೆ. ಜಾಗ ನೀಡುವುದಾಗಿ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ.

ಕೊಯಿಲದಲ್ಲಿ 50 ಎಕ್ರೆ ಜಾಗದಲ್ಲಿ ಬೃಹತ್ ಪೌಲ್ಟ್ರಿ ಫಾರಂ ನಿರ್ಮಾಣವಾಗಲಿದೆ. ಸುಮಾರು 100 ಕೋಟಿ ರೂ ವೆಚ್ಚದಲ್ಲಿ ಕೆಂಪಿನಿಯೊಂದು ಈ ಫಾರಂ ನಿರ್ಮಾಣಕ್ಕೆ ಮುಂದಾಗಿದೆ. ಇದರಿಂದ ಸ್ಥಳೀಯ ಸುಮಾರು 1000 ಮಂದಿಗೆ ಉದ್ಯೋಗವೂ ಲಭಿಸಲಿದೆ. ಈ ಯೋಜನೆಗೆ ಜಾಗ ಕೊಡುವಂತೆ ಸಚಿವರಿಗೆ ಮನವಿ ಮಾಡಿದ್ದೇನೆ. ಜಾಗ ನೀಡುವುದಾಗಿ ಭರವಸೆ ನೀಡಿದ್ದಾರೆ.
ಅಶೋಕ್ ರೈ, ಶಾಸಕರು, ಪುತ್ತೂರು

LEAVE A REPLY

Please enter your comment!
Please enter your name here