ಪುತ್ತೂರು: ಮೂಲತಃ ವಿಟ್ಲ ಸಮೀಪದ ಬೊಬ್ಬೆಕೇರಿ ನಿವಾಸಿಯಾಗಿದ್ದ, ಹಾಗೂ ಹಲವಾರು ವರ್ಷಗಳಿಂದ ದುಬೈ ಉದ್ಯೋಗಿಯಾಗಿದ್ದ, ಪ್ರಸ್ತುತ ಮಂಗಳೂರಿನ ಪಾಂಡೇಶ್ವರ ನಿವಾಸಿ, ವಿಟ್ಲ ಬೊಬ್ಬೆಕ್ಕೇರಿ ಸೊಸೈಟಿ ವಿ. ಅಬ್ದುಲ್ ಖಾದರ್ ರವರ ಸಹೋದರ, ವಿಟ್ಲ ಬೊಬ್ಬೆಕೇರಿ ದಿ.ಇದ್ದೀನ್ ಅಹ್ಮದ್ ಅವರ ಪುತ್ರ ಯೂಸುಫ್ (74 ವ) ಅಲ್ಪಕಾಲದ ಅಸೌಖ್ಯದ ಬಳಿಕ ಇಂದು ನಿಧನರಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.