ಯು.ಪೂವಪ್ಪರವರ ಮನೆಗೆ ದ.ಕ.ಸಂಸದರ ಭೇಟಿ

0

ಹಿರಿಯರ ಮನೆಗಳಿಗೆ ಪೊಲೀಸರ ರಾತ್ರಿ ಭೇಟಿ ಮುಂದುವರಿದರೆ ದೊಡ್ಡ ಮಟ್ಟದ ಹೋರಾಟ-ಕ್ಯಾ|ಚೌಟ

ಪುತ್ತೂರು:ಯಾವುದೇ ಕ್ರಿಮಿನಲ್ ಪ್ರಕರಣ ಇಲ್ಲದ ನಮ್ಮ ಹಿಂದು ಸಂಘಟನೆಯ ಪ್ರಮುಖರ ಮನೆಗೆ ಅದರಲ್ಲೂ ವಿಶೇಷವಾಗಿ ಹಿರಿಯರ ಮನೆಗೆ ಪೊಲೀಸರು ರಾತ್ರಿ ಸಮಯದಲ್ಲಿ ಭೇಟಿ ನೀಡಿ ತೊಂದರೆ ಕೊಡುವ ಹೊಸ ಪ್ರಕ್ರಿಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರಂಭ ಆಗಿದೆ.ಇದು ಮುಂದುವರಿದರೆ ಮುಂದಿನ ದಿನ ದೊಡ್ಡ ದುಟ್ಟದ ಹೋರಾಟ ನಾವು ಮಾಡಲಿದ್ದೇವೆ ಎಂದು ಸಂಸದ ಕ್ಯಾ। ಬ್ರಿಜೇಶ್ ಚೌಟ ಅವರು ಹೇಳಿದ್ದಾರೆ.

ಜೂ.6ರಂದು ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ ಅವರ ಮನೆಗೆ ಭೇಟಿ ನೀಡಿದ ಸಂಸದರು ಪೂವಪ್ಪ ಅವರ ಮನೆಗೆ ನಡು ರಾತ್ರಿಯಲ್ಲಿ ಪೊಲೀಸರು ಬಂದು ಜಿಪಿಎಸ್ ಫೋಟೋ ತೆಗೆದ ವಿಚಾರಕ್ಕೆ ಖಂಡನೆ ವ್ಯಕ್ತ ಪಡಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಸಂಸದರು, ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾಲಿಸಲು ಸಾಧ್ಯವಾಗದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ವೈಫಲ್ಯವನ್ನು ಮುಚ್ಚಿಹಾಕಲು, ಗೃಹಸಚಿವರು ಈ ರೀತಿ ಪೊಲೀಸರ ಮೂಲಕ ಹೊಸ ನಡೆ ಆರಂಭಿಸಿರುವುದು ಸರಿಯಲ್ಲ ಹಿಂದು ಸಂಘಟನೆಗಳ ಪ್ರಮುಖರಮನೆಗೆ ಹೋಗಿ ಅವರನ್ನು ಬೆದರಿಸಿ ಕಾಂಗ್ರೆಸ್ ಅನ್ನು ಮತ್ತೆ ಬೆಳೆಸಬಹುದು ಎಂಬುದು ಅವರ ಭ್ರಮೆ ಮಾತ್ರ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯ ಆದಾಗ ಅಲ್ಲಿ ಪೊಲೀಸ್ ಕಮಿಷನರ್ ಅವರನ್ನು ವರ್ಗಾವಣೆ ಮಾಡಿದರು. ಮಂಗಳೂರಿನಲ್ಲಿ ಕಮಿಷನರ್ ಮತ್ತು ಎಸ್ಪಿಯವರನ್ನು ವರ್ಗಾವಣೆ ಮಾಡಿದರು.ಪೊಲೀಸ್ ಇಲಾಖೆಯನ್ನು ತಾಳಕ್ಕೆ ತಕ್ಕಂತೆ ನಡೆಸುವ ಪ್ರಕ್ರಿಯೆ ಸರಕಾರ ಮಾಡುತ್ತಿದೆ. ಇದನ್ನು ವಿರೋಧಿಸಿ ಮುಂದಿನ ದಿನ ದೊಡ್ಡ ಮಟ್ಟದ ಹೋರಾಟ ಮಾಡಲಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಎಮರ್ಚೆನ್ಸಿ ಮಾದರಿಯಲ್ಲಿ ಮಾಡುತ್ತಿವುದು ಸರಕಾರದ ಪೂರ್ಣ ವೈಫಲ್ಯವಾಗಿದೆ. ಗೃಹಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಬಿಜೆಪಿ ಪ್ರಮುಖರು ಸಂಸದರ ಜೊತೆಯಿದ್ದರು.

LEAVE A REPLY

Please enter your comment!
Please enter your name here