ಪುತ್ತೂರು: ಕೌಟುಂಬಿಕ ಮತ್ತು ಸಾಮಾಜಿಕ “ಹಿಂಸೆ ನಿಲ್ಲಿಸಿ” ಎನ್ನುವ ಘೋಷದಿಂದಿಗೆ ಉಡುಪಿಯ ವಿದ್ಯಾರ್ಥಿಗಳು, ಯುವ ಕಲಾವಿದರಿಬ್ಬರೂ ಮೋಟರ್ ಬೈಕಿನಲ್ಲಿ ಅಂತರ್ ರಾಜ್ಯ ಸುತ್ತೊ ಮೂಲಕ ಮೂರು ಸಾವಿರ ಕಿಲೋಮೀಟರ್ ಬೈಕ್ ರ್ಯಾಲಿ ಆರಂಭಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾಪುವಿನಿಂದ ಮೇ 25 ರಂದು ಬೈಕ್ ಮೂಲಕ ಜಾಥ ಆರಂಭದಸಿರುವಂತಹ ಇರ್ವರು ಜೂನ್ 5 ರಂದು ಪುತ್ತೂರು ತಲುಪಿದ್ದಾರೆ. ಈ ವೇಳೆ ಜೆಸಿಐ ಪುತ್ತೂರು ವತಿಯಿಂದ ಅವರನ್ನು ಸ್ವಾಗತಿಸಲಾಯಿತು. ರಂಗ ನಿರ್ದೇಶಕ, ಚಿತ್ರನಟ, ಬಾಸುಮ ಕೊಡಗು, ಸಂಗೀತ ಕಲಾವಿದೆ ಕಾವ್ಯವಾಣಿ ದಂಪತಿಯ ಪುತ್ರ, ರಂಗಭೂಮಿ- ಚಲನಚಿತ್ರ ನಟ, ಸಂಗೀತ ಸಂಯೋಜಕ, ಮಣಿಪಾಲದ ಮಾಹೆಯ ಮೀಡಿಯಾ ಕಮ್ಯುನಿಕೇಶನ್ ವಿದ್ಯಾರ್ಥಿ ದೃಶಾ ಕೊಡಗು ಮತ್ತು ಉಡುಪಿಯ ಇಂದ್ರಾಳಿಯ ಆರತಿ ಎಂಬುವರ ಪುತ್ರ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿ ಉಜ್ವಲ್ ಕಾಮತ್ ಜೊತೆಯಾಗಿ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಸೇರಿದಂತೆ ಮೂರು ರಾಜ್ಯಗಳಲ್ಲಿ ಮೂರು ಸಾವಿರ ಕಿಲೋಮೀಟರ್ ಜಾಥವನ್ನು ಬೈಕ್ ಮೂಲಕ ಆರಂಭಿಸಿ , ಹಿಂಸೆ ನಿಲ್ಲಿಸಿ ಸಂದೇಶವನ್ನು ಸಾರುವ ಕಾಯಕ ಕೈಗೊಂಡಿದ್ದಾರೆ.
ಜೆಸಿಐ ಪುತ್ತೂರಿನ ಅಧ್ಯಕ್ಷರು ಹಾಗೂ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ , ಜೆಸಿ ವಲಯ ಉಪಾಧ್ಯಕ್ಷರಾದ ಸುಹಾಸ್ ಮರಿಕೆ, ಕೋಶಾಧಿಕಾರಿಯಾದ ಜೆಸಿ ರುಕ್ಮಯ್ಯ, ಅವಿನ್ ಎಂಟರ್ಪ್ರೈಸಸ್ ಮಾಲಕರಾದ ಮೆಲ್ವಿನ್ ಫೆರ್ನಾಂಡಿಸ್ ಮತ್ತು ಜೆಸಿ ಸದಸ್ಯರು ಹಾಗೂ ವಿದ್ಯಾಮಾತಾ ಅಕಾಡೆಮಿಯ ತರಬೇತುದಾರರು ಹಾಗೂ ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಬ್ಬರನ್ನು ಸ್ವಾಗತಿಸಿದರು.