ನೆಲ್ಯಾಡಿ: ಹೊಸಮಜಲು ಮಸೀದಿಯಲ್ಲಿ ಈದುಲ್ ಅದ್ ಹಾ (ಬಕ್ರೀದ್) ನಮಾಝ್

0

ಖತೀಬರಾದ ಪಿಬಿ ಶಂಶೀರ್ ಸಖಾಫಿ ಶಾಂತಿಯ ಸಂದೇಶ ಭಾಷಣ

ನೆಲ್ಯಾಡಿ ಹೊಸಮಜಲು ಜುಮ್ಮಾ ಮಸೀದಿಯಲ್ಲಿ ಈದುಲ್ ಅದ್ ಹಾ ನಮಾಝ್ ಖತೀಬರಾದ ಪಿಬಿ ಶಂಶೀರ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ ನಡೆದು ಜಗತ್ತಿಗೆ ಶಾಂತಿಯನ್ನು ಸಾರಿದ ಇಸ್ಲಾಮ್ ಧರ್ಮದ ಬಗ್ಗೆ ಸಂದೇಶ ಭಾಷಣ ಮಾಡಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಎಂ ಕೆ ಇಬ್ರಾಹಿಂ ಮಾತನಾಡಿ ಪ್ರಸ್ತುತ ಮುಸ್ಲಿಂ ಸಮುದಾಯವು ಎದುರಿಸುತ್ತಿರುವ ಸಮಸ್ಯೆ ಯ ಬಗ್ಗೆ ಜಾಗೃತರಾಗಿರಬೇಕೆಂದು ಆಡಳಿತ ಸಮಿತಿಯ ಪರವಾಗಿ ಈದ್ ಶುಭಾಶಯ ಕೋರಿದರು.


ಆಡಳಿತ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಪಿ ಎ ಕೆ, ಸಮಿತಿ ಪದಾಧಿಕಾರಿಗಳು, ಸದರ್ ಸಿದ್ದೀಕ್ ಮುಈನಿ, ಇಲ್ಯಾಸ್ ಮದನಿ ಹಾಗೂ ಜಮಾಅತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here