ನೆಲ್ಯಾಡಿ: ನೆಲ್ಯಾಡಿ ಆರ್ಲ ಸೈಂಟ್ ಮೇರಿಸ್ ಚರ್ಚ್ನಲ್ಲಿ 2025-26ನೇ ಸಾಲಿನ ನೈತಿಕ ಶಿಕ್ಷಣ ಬೋಧಿಸುವ ಸಂಡೆ ಸ್ಕೂಲ್ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ಅಧ್ಯಯನ ವರ್ಷವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಹೈಕೋರ್ಟ್, ಮಂಗಳೂರು ಹಾಗೂ ಬೆಳ್ತಂಗಡಿ ನ್ಯಾಯಾಲಯಗಳಲ್ಲಿ ವಕೀಲರೂ ಆಗಿರುವ, ಅನುಭವಿ ಮೋಟಿವೇಷನ್ ತರಬೇತುದಾರ ಜೀತಿನ್ ಬೆಳ್ತಂಗಡಿ ಅವರು, ನೈತಿಕ ಶಿಕ್ಷಣವೆಂಬ ಬೆಳಕು ಇಲ್ಲದೆ ಸಮಾಜಕ್ಕೆ ದಾರಿಯೇ ಇಲ್ಲ. ಬಾಲ್ಯದಲ್ಲೇ ನೈತಿಕ ಗುಣಗಳು ಜೀವನದ ಭಾಗವಗಲು ಸಂಡೆ ಸ್ಕೂಲ್ಗಳು ಉತ್ತಮ ಸೇವೆಯನ್ನು ನೀಡುತ್ತಿದೆ ಎಂದು ತಿಳಿಸಿದರು.
ಕಳೆದ ವರ್ಷದ ಎಸ್ಎಸ್ಎಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮ ಗುರು ವಂ.ಫಾ.ಶಾಜಿ ಮಾತ್ಯು, ಸಿ| ಮೆರ್ಸಿ, ಸಿ| ತೆರೆಸ್ ಕುರಿಯನ್, ಸಂಡೆ ಸ್ಕೂಲ್ ಮುಖ್ಯೋಪಾಧ್ಯಾಯರಾದ ಜೋಯ್, ಟ್ರಸ್ಟಿ ಜೋಸ್ಟಿನ್ ಉಪಸ್ಥಿತರಿದ್ದರು.