ಕೆಎಸ್‌ಆರ್‌ಟಿಸಿ ನಿವೃತ್ತ ನಿರ್ವಾಹಕ ರುಕ್ಮಯ ಗೌಡ ಅಲೆಪ್ಪಾಡಿ ನಿಧನ

0

ರಾಮಕುಂಜ: ಕೊಯಿಲ ಗ್ರಾಮದ ಅಲೆಪ್ಪಾಡಿ ಕಲಾಯಿ ನಿವಾಸಿ, ಕೆಎಸ್‌ಆರ್‌ಟಿಸಿ ನಿವೃತ್ತ ನಿರ್ವಾಹಕ ರುಕ್ಮಯ ಗೌಡ(72.)ರವರು ಅಲ್ಪಕಾಲದ ಅಸೌಖ್ಯದಿಂದ ಜೂ.8ರಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ರುಕ್ಮಯ ಗೌಡ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಯಲ್ಲಿದ್ದ ಅವರು ಜೂ.೮ರಂದು ಸಂಜೆ ನಿಧನರಾಗಿದ್ದಾರೆ. ರುಕ್ಮಯ ಗೌಡ ಅವರು ಸುಮಾರು ೩೦ ವರ್ಷ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೂಲತ: ಹಳೆನೇರೆಂಕಿ ಗ್ರಾಮದ ಅಲೆಪ್ಪಾಡಿ ನಿವಾಸಿಯಾಗಿದ್ದ ಇವರು ಕೊಯಿಲ ಗ್ರಾಮದ ಕಲಾಯಿಯಲ್ಲಿ ಜಾಗ ಖರೀದಿಸಿ ನಿವೃತ್ತಿಯ ಬಳಿಕ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಮೃತರು ಪತ್ನಿ, ಕಡಬ ತಾ.ಪಂ.ಮಾಜಿ ಉಪಾಧ್ಯಕ್ಷೆ ಜಯಂತಿ ಆರ್.ಗೌಡ, ಪುತ್ರರಾದ ಕಾರ್ತಿಕ್, ಕೀರ್ತಿಕ್, ಸೊಸೆಯಂದಿರಾದ ನಿಶ್ಮಿತಾ, ಭವ್ಯ, ಮೊಮ್ಮಗಳು, ಸಹೋದರರು ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

ಜೂ.9 ಕ್ಕೆ ಅಂತ್ಯಕ್ರಿಯೆ:

ಮೃತರ ಅಂತ್ಯಕ್ರಿಯೆ ಜೂ.9ರಂದು ಬೆಳಿಗ್ಗೆ ಕಲಾಯಿ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ

LEAVE A REPLY

Please enter your comment!
Please enter your name here