ಮಜಲು ಕ್ಷೇತ್ರದಲ್ಲಿ ಸ್ವಾಮಿ ಕೊರಗಜ್ಜ ದೈವದ ಹರಕೆ ಕೋಲ, ಅಗೇಲು ಸೇವೆ

0

ಪುತ್ತೂರು: ಕಲಿಯುಗ ಕಾರಣಿಕ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಜೂ.8ರಂದು ಮಧ್ಯಾಹ್ನ ಹರಕೆ ಸೇವೆಯಾಗಿ ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲ, ಅಗೇಲು ಸೇವೆ ನಡೆಯಿತು.

ಡಾ.ದೀಪಾದಿನಕರ್ ದುಬೈ ಮತ್ತು ಮನೆಯವರ ಸೇವೆಯಾಗಿ ಮಧ್ಯಾಹ್ನ ಗಂಟೆ 12ರಿಂದ ಸ್ವಾಮಿ ಕೊರಗಜ್ಜ ದೈವದ ಹರಕೆ ಕೋಲ ನಡೆಯಿತು. ಬಳಿಕ, ಅಗೇಲು ಸೇವೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಪ್ರತೀ ತಿಂಗಳ ಸಂಕ್ರಮಣದಂದು ಕ್ಷೇತ್ರದಲ್ಲಿ ಕೊರಗಜ್ಜ ದೈವದ ಕೋಲ, ಅಗ್ನಿ ಕಲ್ಲುರ್ಟಿ ದೈವದ ಕೆಂಡ ಸೇವೆ, ಕೋಲ, ಅಗೇಲು ಸೇವೆ, ಸಾರ್ವಜನಿಕ ಅನ್ನಸಂತರ್ಪಣೆ, ಪ್ರತೀ ಆದಿತ್ಯವಾರ ಮಧ್ಯಾಹ್ನ ಗಂಟೆ 12ಕ್ಕೆ ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲ, ಅಗೇಲು ಸೇವೆ, ಅನ್ನಸಂತರ್ಪಣೆ ನಡೆಯುತ್ತದೆ ಪ್ರತೀ ಸೋಮವಾರ, ಮಂಗಳವಾರ, ಶುಕ್ರವಾರ, ಶನಿವಾರ ಬೆಳಿಗ್ಗೆ ಗಂಟೆ 10.30ರಿಂದ ಪ್ರಶ್ನಾ ಚಿಂತನೆ. ಪ್ರತೀ ಬುಧವಾರ, ಗುರುವಾರಸೂಚಿತ ಪರಿಹಾರ ಕಾರ್ಯ ನಡೆಯುತ್ತದೆ ಎಂದು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ (ಮೊ:9740463437) ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here