ಸವಣೂರು ಚಾಪಳ್ಳ ದರ್ಸ್ ವಿದ್ಯಾರ್ಥಿಗಳಿಂದ ವಿಶ್ವ ಪರಿಸರ ದಿನಾಚರಣೆ

0

ಪುತ್ತೂರು: ಸಯ್ಯಿದ್ ಮುಹಮ್ಮದ್ ಹಾದಿ ತಂಙಳ್ ಮೆಮೋರಿಯಲ್ ದರ್ಸ್ ಚಾಪಲ್ಲ ಸವಣೂರು ಇದರ ವಿದ್ಯಾರ್ಥಿ ಸಂಘಟನೆಯಾದ ಮಕಾಷಿಫುಲ್ ಖುಲೂಬ್ ದರ್ಸ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಚಾಪಲ್ಲ, ಸವಣೂರು ಇದರ ವತಿಯಿಂದ ಜೂ.5ರಂದು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪರಿಸರ ದಿನವನ್ನು ಆಚರಿಸಲಾಯಿತು. ಗಿಡ ನೆಟ್ಟು ಕಾರ್ಯಕ್ರಮ ಉದ್ಘಾಟಿಸಲಾಯಿತು.


ಮುಹಮ್ಮದ್ ಅಶ್ರಫ್ ಪಾಝಿಲ್ ಬಾಖವಿ ಪ್ರಾರ್ಥನೆ ನೆರವೇರಿಸಿ ಮಾತನಾಡಿ ಪರಿಸರ ದಿನದಂದು ಕೇವಲ ಒಂದು ಗಿಡವನ್ನು ನೆಟ್ಟು ಕೈ ತೊಳೆಯುವುದನ್ನು ಬಿಟ್ಟು ಅದನ್ನು ಪೋಷಿಸುವ ಕಡೆಗೂ ಗಮನಹರಿಸಬೇಕು. ತನ್ನ ಸ್ವಾರ್ಥಕ್ಕಾಗಿ ಹಾಗೂ ಅತಿಯಾದ ನಗರೀಕರಣದ ಉದ್ದೇಶದಿಂದ ಬೇಕಾಬಿಟ್ಟಿ ಗಿಡಮರಗಳನ್ನು ಕಡೆಯುವುದನ್ನು ತಡೆಗಟ್ಟಬೇಕು. ಪ್ರವಾದಿ (ಸ.ಅ)ರ ಮಾತಿನಂತೆ ‘ನಾಳೆ ಅಂತ್ಯದಿನ ಸಂಭವಿಸಬಹುದೆಂದು ಖಚಿತವಿದ್ದರೂ ನೀವು ಗಿಡಮರಗಳನ್ನು ನೆಡಿರಿ’ ಎಂಬ ಹದೀಸನ್ನು ಪಠಿಸಿ ಪರಿಸರದ ಬೆಳವಣಿಗೆಗೆ ಇಸ್ಲಾಂ ನೀಡುವ ಪ್ರಾಮುಖ್ಯತೆಯನ್ನು ವಿವರಿಸಿದರು.


ಕಾರ್ಯಕ್ರಮದಲ್ಲಿ ಸಂಘಟನೆಯ ಮುಖ್ಯ ಸಲಹೆಗಾರರಾದ ಸಯ್ಯದ್ ಮುಯೀನ್ ತಂಙಳ್ ಸಾಲ್ಮರ ಹಾಗೂ ಸಯ್ಯದ್ ಹಸನ್ ತಂಙಳ್ ಸಾಲ್ಮರ, ಪ್ರ.ಕಾರ್ಯದರ್ಶಿ ಸಿನಾನ್ ಸವಣೂರು, ಕೋಶಾಧಿಕಾರಿ ಸ್ವಾದಿಕ್ ಕಾಜೂರು, ಕನ್ವೀನರ್ ಹಾಫಿಲ್ ಅಕ್ಮಲ್ ಸಜಿಪ ಹಾಗೂ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಂ.ಕ್ಯೂ.ಎಸ್.ಎ ಅಧ್ಯಕ್ಷ ಶುಹೈಬ್ ಪೆರ್ಲಂಪಾಡಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here