ಯಾವುದೇ ಪ್ರಾಣ ಹಾನಿ ಆಗದಂತೆ ತುರ್ತು ಕ್ರಮಕೈಗೊಳ್ಳಿ – ತಹಶೀಲ್ದಾರ್ ನಾಗರಾಜ್
ಪುತ್ತೂರು: ದಕ್ಷಿಣ ಕನ್ನಡದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಜೂ. 13 ಮತ್ತು14ಕ್ಕೆ ರೆಡ್ ಅಲರ್ಟ್ ಘೋಷಣೆಯಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಪ್ರಾಕೃತಿಕ ವಿಕೋಪ ಎದುರಿಸಲು ಈಗಾಗಲೇ ಸಲಹೆ ಸೂಚನೆ ನೀಡಿದ್ದಾರೆ. ಪುತ್ತೂರು ತಾಲೂಕಿನಲ್ಲೂ ಮಳೆಯಿಂದಾಗಿ ಹಾನಿಯಾಗುವ ಸಾಧ್ಯತೆ ಇರುವ ಸ್ಥಳಗಳನ್ನು ಗುರುತಿಸಿ, ಯಾವುದೇ ಪ್ರಾಣ ಹಾನಿ ಆಗದಂತೆ ತುರ್ತು ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರ್ ನಾಗರಾಜ್ ಅವರು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳಿಗೆ, ಗ್ರಾ.ಪಂ ಆಡಳಿತಾಧಿಕಾರಿ ಮತ್ತು ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ದ.ಕ.ಜಿಲ್ಲೆಯಲ್ಲಿ ರೆಡ್ಅಲರ್ಟ್ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಪುತ್ತೂರು ತಾಲೂಕು ಪಂಚಾಯತ್ನಲ್ಲಿ ಜೂ. 11ರಂದು ತುರ್ತು ಸಭೆ ನಡೆಸಲಾಯಿತು. ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಎಲ್ಲೆಲ್ಲ ಧರೆ ಕುಸಿತ, ಭೂಕುಸಿತ, ಅಪಾಯದಲ್ಲಿರುವ ಮನೆಗಳು, ಇತರೆ ಕಟ್ಟಗಳು, ಕೃತಕ ನೆರೆಗಳಾಗುವ ಸ್ಥಳಗಳಿಗೆ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿತ ಆಯಾ ತಂಡಗಳು ಕುದ್ದಾಗಿ ತೆರಳಿ ಮಾಹಿತಿ ಪಡೆಯಬೇಕು. ಎಲ್ಲವನ್ನು ದಾಖಲಿಕರಣ ಮಾಡಿ. ಜಿಲ್ಲಾಧಿಕಾರಿಗಳಿಗೆ ವರದಿ ಮಾಡಲಿಕ್ಕಿದೆ. ಎಲ್ಲಾ ಕಡೆ ಜಿ.ಪಿಎಸ್ ಆಧಾರಿತ ಪೊಟೋ ತೆಗೆಯಬೇಕು ಮತ್ತು ಪ್ರಾಕೃತಿಕ ವಿಕೋಪ ಪಡೆಯ ಆಪ್ಗೆ ದಾಖಲಿಸಿ. ತಮ್ಮ ವ್ಯಾಪ್ತಿಯಲ್ಲಿ ಈ ಕುರಿತು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಿದ್ದಲ್ಲಿ ನಿಮ್ಮ ಮೇಲೆ ಕ್ರಮ ಕೈಗೊಳ್ಳವ ಕುರಿತು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆಂದು ತಿಳಿಸಿದರು.
ಯಾರು, ಯಾಕೆ ವಿಚಾರಿಸದೆ ಪ್ರಾಣ ಹಾನಿ ತಪ್ಪಿಸಿ:
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ಮಾತನಾಡಿ ಕಳೆದ ಬಾರಿಯೇ ಸುಮಾರು 500 ಮೀಲಿಗಿಂತಲೂ ಜಾಸ್ತಿ ಮಳೆಯಾಗಿದೆ. ಈ ಬಾರಿ ಅದಕ್ಕಿಂತಲೂ ಜಾಸ್ತಿ ಮಳೆ ಸುರಿಯುವ ಮುನ್ಸೂಚನೆ ಇದೆ. ಹಾಗಾಗಿ ಮಳೆಗೆ ಧರೆ ಕುಸಿತ ಸ್ಥಳ ಆಗುವ ಸಾಧ್ಯತೆ ಇರುವಾಗ ಯಾರು, ಯಾಕೆ ಮಾಡಿದ್ದು ಎಂದು ಸಮಯ ವೇಷ್ಟ್ ಮಾಡದೆ ಎಲ್ಲಿಯೂ ಪ್ರಾಣ ಹಾನಿ ಆಗದಂತೆ ಕಾರ್ಯ ನಿರ್ವಹಿಸಿ. ಮನೆ ಅಪಾಯದಲ್ಲಿದ್ದರೆ ಮನೆ ಮಂದಿಯನ್ನು ಸ್ಥಳಾಂತರ ಗೊಳಿಸುವ ಕುರಿತು ಮಾಹಿತಿ ಅಥವಾ ನೋಟೀಸ್ ನೀಡಿ. ಅವರು ಸ್ಥಳಾಂತರ ಆಗಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಿ. ಮನೆ ಮಂದಿಗೆ ಬೇರೆ ಸ್ಥಳ ಇಲ್ಲದಿದ್ದಲ್ಲಿ ಕಾಳಜಿ ಕೇಂದ್ರ ತೆರೆದು ಸಹಕಾರ ನೀಡಿ. ತಮ್ಮ ತಮ್ಮ ವ್ಯಾಪ್ತಿಯಲ್ಲಿ ತೆರಳಿ ಖುದ್ದು ಪರಿಶೀಲಿಸಿ ಎಂದರು. ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹಾಗು ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.