ವಿದ್ಯುತ್ ಬಿಲ್‌ನಲ್ಲಿ ಪಿಂಚಣಿ, ಗ್ರಾಚ್ಯುಟಿ ಶುಲ್ಕ ಸಂಸ್ಥೆಯೇ ಪಾವತಿಸಲು ಸೂಚನೆಯಿದ್ದರೂ ಗ್ರಾಹಕರಿಂದ ವಸೂಲಿ-ಆರೋಪ

0

ಪುತ್ತೂರು: ಮನೆ ಮತ್ತು ಉದ್ಯಮ ಕಟ್ಟಡಗಳಿಗೆ ಬರುವ ವಿದ್ಯುತ್ ಬಿಲ್‌ಗಳಲ್ಲಿ ಇಲ್ಲಿನ ತನಕ ರಿಯಾಯಿತಿ ದರ, ಇಂಧನ ಹೊಂದಾಣಿಕೆ ಶುಲ್ಕ, ತೆರಿಗೆ ಸಂಗ್ರಹವಿತ್ತು. ಇದೀಗ ಅದೇ ಪಟ್ಟಿಯಲ್ಲಿ ಪಿಂಚಣಿ ಮತ್ತು ಗ್ರಾಚ್ಯುಟಿ ಶುಲ್ಕ ಸೇರಿಕೊಂಡಿದೆ. ಇದು ವಿಶೇಷವಾಗಿ ಜೂನ್ ತಿಂಗಳಿಂದ ಬಂದಿದ್ದು, ವಿದ್ಯುತ್ ದರದೊಂದಿಗೆ ಕೆಪಿಟಿಸಿಎಲ್ ಮತ್ತು ಮೆಸ್ಕಾಂಗಳ ನೌಕರರ ಪಿಂಚಣಿ, ಗ್ರಾಚ್ಯುಟಿಯನ್ನು ಭರಿಸಲು ಗ್ರಾಹಕರ ಮೇಲೆ ಬರೆ ಬಿದ್ದಂತಾಗಿದೆ.

ಇತ್ತೀಚೆಗಷ್ಟೇ ವಿದ್ಯುತ್ ದರ ಹೆಚ್ಚಿಸಿದ್ದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‌ಸಿ)ವು ಗೃಹೋಪಯೋಗಿ ಸೇರಿದಂತೆ ಎಲ್ಲಾ ಬಗೆಯ ವಿದ್ಯುತ್ ಸಂಪರ್ಕಗಳ ನಿಗದಿತ ಶುಲ್ಕವನ್ನು ಪ್ರತಿ ಕಿಲೋ ವ್ಯಾಟ್‌ಗೆ 25 ರೂ. ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಮತ್ತೊಂದೆಡೆ ವಿದ್ಯುತ್ ದರವನ್ನು ಯೂನಿಟ್‌ಗೆ 10 ಪೈಸೆ ಕಡಿಮೆ ಮಾಡಿದ್ದು, ಪರಿಷ್ಕೃತ ದರಪಟ್ಟಿಯನ್ನೂ ಜಾರಿ ಮಾಡಿತ್ತು. ಆದರೆ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 10 ಪೈಸೆ ಇಳಿಸಿ ಗ್ರಾಹಕರ ಕಣ್ಣೊರೆಸುವ ನಾಟಕವಾಡಿರುವ ಕೆಇಆರ್‌ಸಿ, ತೆರೆಮರೆಯಲ್ಲೇ ನಿಗದಿತ ಶುಲ್ಕವನ್ನು ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಬರೆ ಎಳೆದಿದೆ. ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ನೌಕರರ ಪಿಂಚಣಿ, ಗ್ರಾಚ್ಯುಟಿಗೆ ಹಣ ಹೊಂದಿಸಲು ಪ್ರತಿ ಯೂನಿಟ್‌ಗೆ ಹೆಚ್ಚಳ ಮಾಡಲಾಗಿರುವ 36 ಪೈಸೆಯ ಹೊರೆಯು ಗ್ರಾಹಕರ ಮೇಲೆ ಬೀಳಲಿದೆ. ಸರಕಾರದ ಬದಲು ಗ್ರಾಹಕರಿಂದಲೇ ಹೆಚ್ಚುವರಿಯಾಗಿ ಸರ್‌ಚಾರ್ಜ್ ರೂಪದಲ್ಲಿ ಪಿಂಚಣಿ ಮತ್ತು ಗ್ರಾಚ್ಯುಟಿಗೆ ಮಾಸಿಕ ಬಿಲ್‌ನಲ್ಲಿ ಹಣ ವಸೂಲಿ ಮಾಡಲಾಗುತ್ತದೆ.ಮೆಸ್ಕಾಂ ವಿದ್ಯುತ್ ಬಿಲ್‌ನ ಪಟ್ಟಿಯಲ್ಲಿ ಪಿಂಚಣಿ ಮತ್ತು ಗ್ರಾಚ್ಯುಟಿ ಶುಲ್ಕ ಸೇರಿಸಲಾಗಿದೆ.ಸರಕಾರ ಇದನ್ನು, ಸಂಸ್ಥೆ ಪಾವತಿಸುವಂತೆ ಆದೇಶಿಸಿದರೂ ಸಂಸ್ಥೆ ಮಾತ್ರ ಅದನ್ನು ಜನರಿಂದ ವಸೂಲಿ ಮಡುತ್ತಿರುವ ಕುರಿತು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಂಚಣಿ, ಗ್ರಾಚ್ಯುಟಿ ರಿಕವರಿಗೆ ಆದೇಶ: ವಿದ್ಯುತ್‌ಗೆ ಸಂಬಂಧಿಸಿ ಸಿಬ್ಬಂದಿಗಳಿಗೆ ನೀಡುವ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ಸಂಸ್ಥೆಯೇ ಪಾವತಿಸುವಂತೆ ಸರಕಾರ ಸೂಚಿಸಿದೆ. ಹಾಗಾಗಿ ಬಿಲ್‌ನಲ್ಲಿ ಅದನ್ನು ಸೇರಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರಕಾರದಿಂದ ಜನರಿಗೆ ಎಲೆಕ್ಟ್ರಿಕ್ ಶಾಕ್ !

ಮೆಸ್ಕಾಂ ತನ್ನ ಉದ್ಯೋಗಿಗಳಿಗೆ ಪಿಎಎಫ್ ಗ್ರಾಚ್ಯುಟಿಗಾಗಿ ಗ್ರಾಹಕರಿಂದ ಹಣವನ್ನು ಸಂಗ್ರಹಿಸುತ್ತಿದೆ.ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಪಿಎಎಫ್ ಮತ್ತು ಗ್ರಾಜ್ಯುಟಿ ಪಾವತಿಸುವ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸುವುದು ನ್ಯಾಯಯುತವಲ್ಲ.ನಾಳೆ ಅವರು ತಮ್ಮ ಉದ್ಯೋಗಿಗಳಿಗೆ ಪಾವತಿಸಬೇಕಾದ ಸಂಬಳವನ್ನೂ ಗ್ರಾಹಕರಿಂದ ಸಂಗ್ರಹಿಸಬಹುದು. ರಾಜ್ಯ ಸರ್ಕಾರದ ಆದೇಶದ ಮೇರೆಗೆ ಸಾರ್ವಜನಿಕರು ತಮ್ಮ ಗೃಹ ಜ್ಯೋತಿ ಯೋಜನೆಯನ್ನು ಪೂರೈಸಲು ಹಣವನ್ನು ಸಂಗ್ರಹಿಸಲು ವಿದ್ಯುತ್ ಸರಬರಾಜು ಕಂಪನಿಯಿಂದ ಇಂತಹ ದೌರ್ಜನ್ಯಗಳನ್ನು ಪ್ರತಿಭಟಿಸಬೇಕು.‌ ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಪಡೆಯಲು, ಮತದಾರರನ್ನು ಓಲೈಸಲು ಚುನಾವಣಾ ಪ್ರಚಾರದ ಸಮಯದಲ್ಲಿ ಘೋಷಿಸಲಾದ ರಾಜ್ಯ ಸರ್ಕಾರದ ಉಚಿತ ಯೋಜನೆಗಳಿಗೆ ಗ್ರಾಹಕರು ಜವಾಬ್ದಾರರಲ್ಲ.ಸಾರ್ವಜನಿಕರು ಇಂತಹ ದೌರ್ಜನ್ಯಗಳ ವಿರುದ್ಧ ಪ್ರಶ್ನೆ ಮಾಡಬೇಕು ಮತ್ತು ಗ್ರಾಹಕ ನ್ಯಾಯಾಲಯ ಮತ್ತು ಕಾನೂನು ನ್ಯಾಯಾಲಯದಲ್ಲಿ ಗ್ರಾಹಕರನ್ನು ವಂಚಿಸಿದ್ದಕ್ಕಾಗಿ ವಿದ್ಯುತ್ ಸರಬರಾಜು ಕಂಪನಿ, ಕೆಇಎಸ್ ನಿಯಂತ್ರಣ ಮಂಡಳಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಬಾಲಚಂದ್ರ ಸೊರಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here