ನಿಡ್ಪಳ್ಳಿ: ಚೂರಿಪದವು ಶಾಲಾ ಮಂತ್ರಿಮಂಡಲ ರಚನೆ 

0

ನಿಡ್ಪಳ್ಳಿ: ದ.ಕ.ಜಿ.ಹಿರಿಯ ಪ್ರಾಥಮಿಕ ಶಾಲೆ ಚೂರಿಪದವು ಇದರ 2025-26ನೇ ಸಾಲಿನ ನೂತನ ಮಂತ್ರಿಮಂಡಲವನ್ನು ರಚಿಸಲಾಯಿತು. ಶಾಲಾ ಮುಖ್ಯ ಮಂತ್ರಿಯಾಗಿ ಶರಣ್, ಉಪಮುಖ್ಯಮಂತ್ರಿಯಾಗಿ ಫಾತಿಮತ್ ಶಾಹಿದ ಆಯ್ಕೆಯಾದರು.

ವಿರೋಧ ಪಕ್ಷದ ನಾಯಕನಾಗಿ ಕಾಮಿಲ್, ಶಿಕ್ಷಣ ಮತ್ತು ವಾರ್ತಾಮಂತ್ರಿಯಾಗಿ ಆಯಿಷತ್ ಸಫಾ ಮತ್ತು ಉಪಮಂತ್ರಿಯಾಗಿ ಫಿದಾ, ಆಹಾರ ಮತ್ತು ಆರೋಗ್ಯ ಮಂತ್ರಿಯಾಗಿ ಭುವನೇಶ್ ಮತ್ತು ಉಪಮಂತ್ರಿಯಾಗಿ ಮೈಝ, ಗೃಹ ಮಂತ್ರಿಯಾಗಿ ಶರಣ್ ಮತ್ತು ಉಪಮಂತ್ರಿಯಾಗಿ ಶ್ರೀಜಿತ್, ಕ್ರೀಡಾ ಮತ್ತು ಸಾಂಸ್ಕೃತಿಕ ಮಂತ್ರಿಯಾಗಿ ಪೂರ್ಣೇಶ್ ಮತ್ತು ಉಪಮಂತ್ರಿಯಾಗಿ ಶಾಹಿದ, ಕೃಷಿ ಮಂತ್ರಿಯಾಗಿ ಅಬ್ದುಲ್ ವಾರಿಸ್, ಉಪಮಂತ್ರಿಯಾಗಿ ಮುಬಶಿರ್, ಆಹಾರ ಮಂತ್ರಿಯಾಗಿ ರಿಹಾನ್ ಖಾನ್ ಮತ್ತು ಉಪಮಂತ್ರಿಯಾಗಿ ತೌಫೀರ ಆಯ್ಕೆಯಾದರು. ಮುಖ್ಯಗುರು ಲಕ್ಷ್ಮಿಯವರು ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣವಚನ ಬೋಧಿಸಿದರು.ಸಹ ಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here