ಕೊಳ್ತಿಗೆಯಲ್ಲಿ ಕಾಡಾನೆ ಉಪಟಳ, ಕೃಷಿ ಹಾನಿ

0

ಪುತ್ತೂರು: ಕೊಳ್ತಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆ ಉಪಟಳ ಆರಂಭಿಸಿದ್ದು ಜೂ.10 ರಂದು ರಾತ್ರಿ ಗ್ರಾಮದ ವಿವಿಧ ಕಡೆಗಳಲ್ಲಿ ಕೃಷಿ ಹಾನಿಯುಂಟು ಮಾಡಿದೆ.

ಬೀರ್ಣಕಜೆ ಶಿವರಾಮ ಭಟ್‌ರವರ ತೋಟಕ್ಕೆ ನುಗ್ಗಿದ ಒಂಟಿ ಸಲಗ ಕೃಷಿ ಹಾನಿಯುಂಟು ಮಾಡಿದೆ.ತೋಟದಲ್ಲಿದ್ದ ಅಡಿಕೆ ಸಸಿ, ಬಾಳೆ ಬಾಳೆಗಿಡ ಹಾಗೇ ಇತರ ಮರಗಳಿಗೆ ಹಾನಿಯುಂಟು ಮಾಡಿದೆ. ಕಾಡಾನೆ ಆನಡ್ಕ ತೋಟದಮೂಲೆ ಕಡೆಗೆ ಹೆಜ್ಜೆ ಹಾಕಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ಒಂಟಿ ಸಲಗ ಕೊಳ್ತಿಗೆ ಪರಿಸರದಲ್ಲಿಯೇ ಬೀಡು ಬಿಟ್ಟಿದ್ದು ವಿವಿಧ ಕಡೆಗಳಲ್ಲಿ ಕೃಷಿ ಹಾನಿ ಮಾಡಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here