ಪುತ್ತೂರು ಸುದ್ದಿ ಮಾಹಿತಿ ಕೇಂದ್ರದಲ್ಲಿ ಸಂಜೆ ೫ರಿಂದ ಎಸ್ಎಸ್ಎಲ್ಸಿ ಪಾಸ್-ಫೈಲ್, ಪಿಯುಸಿ ಪಾಸ್-ಫೈಲ್, ಡಿಗ್ರಿ ಫೈಲ್ ಆದ ವಿದ್ಯಾರ್ಥಿಗಳಿಗೆ ಉಚಿತ ಐಟಿಐ ಮಾಹಿತಿ ಕಾಯಗಾರ
ಪುತ್ತೂರು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ನಲ್ಲಿ ಕರಿಮಣಿ ಮೇಳ
ಕಲ್ಲಾರೆ ಕೃಷ್ಣ ಆರ್ಕೇಡ್ ಡಾ. ನಝೀರ್ ಅಹಮ್ಮದ್ರವರ ಕ್ಲಿನಿಕ್ನಲ್ಲಿ ಬೆಳಿಗ್ಗೆ ೯.೩೦ರಿಂದ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣೆ, ಕೊಲೆಸ್ಟರಾಲ್, ಹೆಚ್ಬಿಎ೧ಸಿ, ಶುಗರ್, ಬಿ.ಎಂ.ಡಿ, ನ್ಯೂರೋಪಥಿ, ಕ್ಯಾಲ್ಸಿಯಂ ಉಚಿತ ತಪಾಸಣೆ
ಪುತ್ತೂರು ಪರಾಶರ ವಕೀಲರ ಸಭಾಭವನದಲ್ಲಿ ಮಧ್ಯಾಹ್ನ ೨.೩೦ಕ್ಕೆ ಪುತ್ತೂರು ವಕೀಲರ ಸಂಘದಿಂದ ಹರಿದ್ವರ್ಣ ನೇಚರ್ ಕ್ಲಬ್ನ ಉದ್ಘಾಟನೆ, ಪರಿಸರ ದಿನಾಚರಣೆಯ ಪ್ರಯುಕ್ತ ಉಚಿತ ಸಸಿಗಳ ವಿತರಣೆ
ಪುತ್ತೂರು ಎಮ್. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಸಂಜೆ ೩.೩೦ಕ್ಕೆ ಪುತ್ತೂರು ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿಯ ಸಭೆ
ಶುಭವಿವಾಹ
ಪುತ್ತೂರು ಕೆಮ್ಮಿಂಜೆ ಶ್ರೀ ಷಣ್ಮುಖ ಮಹಾವಿಷ್ಣು ಸಭಾಭವನದಲ್ಲಿ ಪುತ್ತೂರು ತಾಲೂಕು ಸಾಮೆತ್ತಡ್ಕ ಶಾಲಿನಿ ಮತ್ತು ಕೃಷ್ಣಮೂರ್ತಿ ಬಳ್ಳಕ್ಕುರಾಯರ ಪುತ್ರಿ ಸಾಧನಾ ಸರಸ್ವತಿ ಮತ್ತು ಎರ್ನಾಕುಲಂ ಜಿಲ್ಲೆಯ ಕಣಯನ್ನೂರು ತಾಲೂಕಿನ ಮರಡು ಮೀರ ಮತ್ತು ವೇಣುಗೋಪಾಲ ಕಣ್ಣಾರಾಯರ ಪುತ್ರ ಗೋಪಿಕೃಷ್ಣರವರ ವಿವಾಹ
ಮಾಣಿ ಜನ ಭವನದಲ್ಲಿ ಇಳಂತಿಲ, ಹೊಸಮೂಲೆ ಪಿ. ಗೋಪಾಲಕೃಷ್ಣ ಭಟ್ ಮತ್ತು ಶಂಕರಿಯವರ ಪುತ್ರಿ ಹೇಮಾ ಶುಭಾಷಿಣಿ ಮತ್ತು ಎಂ.ಆರ್. ಮಹಾಲಿಂಗ ಭಟ್ ಮತ್ತು ಶ್ರೀಲತಾರವರ ಪುತ್ರ ಶ್ರೀಚಂದ್ರವರ ವಿವಾಹ
ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮದ ಮಿನಾವು ಜಾನಕಿ ಮತ್ತು ದಿ| ಗಿರಿಯಪ್ಪ ಗೌಡರ ಪುತ್ರ ಚೇತನ್ (ಗಣೇಶ್) ಮತ್ತು ಪುತ್ತೂರು ತಾಲೂಕು ಬನ್ನೂರು ಗ್ರಾಮದ ಕಲ್ಲಿಮಾರು ಜಯಲಕ್ಷ್ಮಿ ಮತ್ತು ದಿ| ಜತ್ತಪ್ಪ ಗೌಡರ ಪುತ್ರಿ ಲಾವಣ್ಯರವರ ವಿವಾಹ ಹಾಗೂ ಮುರ ಗೌಡ ಸಮುದಾಯ ಭವನದಲ್ಲಿ ಆರತಕ್ಷತೆ, ಅತಿಥಿ ಸತ್ಕಾರ