ಉಪ್ಪಿನಂಗಡಿ: ಇಲ್ಲಿನ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ (ನಿ) ಇದರ ಆಡಳಿತ ನಿರ್ದೇಶಕರಾಗಿದ್ದು, ಕೆಲ ದಿನಗಳ ಹಿಂದೆ ಜ್ವರದಿಂದಾಗಿ ನಿಧನರಾದ ಸದಾನಂದ ಶೆಟ್ಟಿಯವರಿಗೆ ಸಂಘದ ಕೇಂದ್ರ ಕಚೇರಿಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಮಂಗಳವಾರದಂದು ನಡೆಯಿತು.
ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಹುಟ್ಟು ಕೃಷಿಕರಾಗಿ ಬಿಎಸ್ಸೆನ್ನೆಲ್ ಉದ್ಯೋಗಿಯಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯಯರಾಗಿದ್ದುಕೊಂಡು ಇದೀಗ ಸಹಕಾರಿ ಕ್ಷೇತ್ರಕ್ಕೆ ಕಾಲಿರಿಸಿದ್ದ ಸದಾನಂದ ಶೆಟ್ಟಿಯವರು ವಿಚಾರ ಬದ್ಧತೆಯ ವ್ಯಕ್ತಿತ್ವದವರು. ಸಂಘದ ಉನ್ನತಿಗಾಗಿ ಕನಸು ಕಂಡಿದ್ದ ಅವರ ಅಕಾಲಿಕ ಅಗಲಿಕೆ ಸಹಕಾರಿ ಕ್ಷೇತ್ರಕ್ಕೆ ತುಂಬಲಾರದ ನಷ್ಠ ಎಂದು ತಿಳಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸದಾನಂದ ಶೆಟ್ಟಿಯವರದ್ದು ಅಹಂ ಇಲ್ಲದ ಸರಳ- ಸಜ್ಜನಿಕೆಯ ವ್ಯಕ್ತಿತ್ವ. ಎಲೆ ಮರೆಯ ಕಾಯಿಯಂತೆ ಯಾವುದೇ ಪ್ರಚಾರ ಬಯಸದೇ ಸಮಾಜಕ್ಕೆ ತನ್ನ ಸೇವೆಯನ್ನು ನೀಡುತ್ತಿದ್ದರು. ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು. ಮೃತರ ಸಹೋದರ ಲಕ್ಷ್ಮಣ ಶೆಟ್ಟಿ , ಸಂಘದ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ದಯಾನಂದ ಸರೋಳಿ, ನಿರ್ದೇಶಕರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ , ಸುಂದರ ಕೆ., ಗೀತಾ, ರಾಘವ ನಾಯ್ಕ, ಸಂಧ್ಯಾ, ವಸಂತ ಪಿ., ರಾಜೇಶ್ ರಾವ್ , ಶ್ರೀರಾಮ ಪಾತಾಳ, ಮಾಜಿ ಅಧ್ಯಕ್ಷ ಕೆ.ವಿ. ಪ್ರಸಾದ, ಪ್ರಮುಖರಾದ ಅಜೀಜ್ ಬಸ್ತಿಕಾರ್, ಹರಿರಾಮಚಂದ್ರ, ಸುರೇಶ್ ಅತ್ರಮಜಲು, ಮಹೇಂದ್ರ ವರ್ಮ, ಅರವಿಂದ ಭಂಡಾರಿ, ಶರತ್ ಕೋಟೆ ಮೊದಲಾದವರು ಭಾಗವಹಿಸಿದ್ದರು.
ಸಂಘದ ಉದ್ಯೋಗಿ ಪುಷ್ಪರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರವೀಶ್ ಹೆಚ್ ಟಿ, ಅಕ್ಷಯ್ ಕುಮಾರ್ ಮತ್ತಿತರರು ಸಹಕರಿಸಿದರು.
