ನೆಲ್ಯಾಡಿ : ಆರ್ಲ ದ ಸೆಂಟ್ ಮೇರಿಸ್ ಚರ್ಚ್ ನ ವಾರ್ಷಿಕ ಮಹಾ ಸಭೆ ಯು ಸೆಂಟ್ ಮೇರಿಸ್ ಚರ್ಚ್ ನಲ್ಲಿ ನಡೆದು2024-25ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರಗಳನ್ನು ಮಂಡಿಸಿ ಒಪ್ಪಿಗೆ ಪಡೆಯಲಾಯಿತು.
ಸದರಿ ಸಭೆಯಲ್ಲಿ 2025-26ನೇ ಸಾಲಿನ ಟ್ರಸ್ಟಿ ಗಳಾಗಿ ಹೃದಿತ್ ಪುದುಮನ, ಜೈಸನ್ ಕುಳತಿನಾಲ್, ಜೋಸ್ಟಿನ್ ನೆನ್ಮಣಿ ಮಟ್ಟಮ್, ಬಾಬು ಮುಳವೇಲಿ ಪರಂಭಿಲ್ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಯಾಗಿ ನ್ಯಾಯವಾದಿ ಜೇಮ್ಸ್ ಪುದುಮನ ಹಾಗೂ ಅಕೌಂಟಟ್ ಆಗಿ ಸೇಬಾಷ್ಟಿ ಯನ್ ಪುಳಿಕಾಯತ್ ಆಯ್ಕೆಯಾದರು. ನೆಲ್ಯಾಡಿ ಆರ್ಲ ಚರ್ಚ್ ಗಳ ಧರ್ಮ ಗುರು ವಂದನಿಯ ಶಾಜಿ ಮಾತ್ಯು ಧರ್ಮಾಧ್ಯಕ್ಷರ ಒಪ್ಪಿಗೆ ಯೊಂದಿಗೆ ಪ್ರಮಾಣ ವಚನ ಬೋದಿಸಿದರು