ನಿಡ್ಪಳ್ಳಿ; ಮುಂಡೂರು ಶಾಲಾ ಮಂತ್ರಿ ಮಂಡಲ ರಚನೆ – ನಾಯಕನಾಗಿ ಮನ್ವಿತ್ ಬಿ.ಎಸ್, ಉಪ ನಾಯಕನಾಗಿ ಜನಿತ್ ಬಿ.ಕೆ.

0

ನಿಡ್ಪಳ್ಳಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು 1 ಇದರ 2025-26ನೇ ಸಾಲಿನ ಶಾಲಾ ಮಂತ್ರಿ ಮಂಡಲವನ್ನು ಜೂ.11ರಂದು ಮುಖ್ಯ ಶಿಕ್ಷಕಿ ಆಶಾ. ಎಸ್ ರವರ ನೇತೃತ್ವದಲ್ಲಿ ರಚಿಸಲಾಯಿತು.

ಶಾಲಾ ನಾಯಕನಾಗಿ ಮನ್ವಿತ್ ಬಿ ಎಸ್, ಉಪ ನಾಯಕನಾಗಿ ಜನಿತ್ ಬಿ ಕೆ ಅಯ್ಕೆಯಾದರು.ಶಿಕ್ಷಣ ಮಂತ್ರಿಯಾಗಿ ಅಶ್ವಿತ್ ಆರ್, ಶಿಸ್ತು ಮಂತ್ರಿಯಾಗಿ ಮೋಹಿತ ಎನ್ , ಕ್ರೀಡಾ ಮಂತ್ರಿಯಾಗಿ ದೀಕ್ಷಾ ಡಿ,ಸಾಂಸ್ಕೃತಿಕ ಮಂತ್ರಿಯಾಗಿ ಜಸ್ಮಿತಾ ಕೆ, ವಿರೋಧ ಪಕ್ಷದ ನಾಯಕಿಯಾಗಿ ತನುಶ್ರೀ ಇವರನ್ನು ಆಯ್ಕೆ ಮಾಡಲಾಯಿತು. ಇವಿಎಂ ಸಿಮ್ಯುಲೇಟರ್ ಮೊಬೈಲ್ ಅಪ್ಲಿಕೇಷನ್ ಮೂಲಕ ಮತದಾನ ಪ್ರಕ್ರಿಯೆಯನ್ನು ನಡೆಸಲಾಯಿತು. ಸಹ ಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here