ಪುತ್ತೂರು: ಬೈಪಾಸ್ ರಸ್ತೆ ಪರ್ಲಡ್ಕ ಹಾಗೂ ಬೀರಮಲೆ ಪರಿಸರದಲ್ಲಿ ಸಂಚರಿಸುತ್ತಿದ್ದ ಸರ್ಪವೊಂದು ಜೂ.5 ರಂದು ವಾಹನ ಅಪಘಾತದಲ್ಲಿ ಮೃತಪಟ್ಟಿರುತ್ತದೆ. ಇದರ ಸದ್ಗತಿಗಾಗಿ ಜೂ.15 ರಂದು ಬೆಳಿಗ್ಗೆ 9.30 ರಿಂದ ಅಪೂರ್ವ ಸೆಂಟರ್ (ಸತೀಶ್ ರೈಯವರ ಮನೆ) ಬೈಪಾಸ್ ರಸ್ತೆ ಇಲ್ಲಿ ಕೆಮ್ಮಿಂಜೆ ವೇ.ಮೂ. ಶ್ರೀಕೃಷ್ಣ ಕಲ್ಲೂರಾಯರವರ ನೇತೃತ್ವದಲ್ಲಿ ಸರ್ಪ ಸಂಸ್ಕಾರ ಕಾರ್ಯ ನಡೆಯಲಿದೆ.
ಮಧ್ಯಾಹ್ನ ಗಂಟೆ 1 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸತೀಶ್ ರೈ – 9449486627 ಹಾಗೂ ಹರೀಶ್ ಆಚಾರ್ಯ – 9902112280 ಇವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.