ಹೆಸರಾಂತ “ಶಿವದೂತೆ ಗುಳಿಗೆ ” ತಂಡದಿಂದ ಮತ್ತೊಂದು ದಂಡಯಾತ್ರೆ…
ವಿಜಯ್ ಕುಮಾರ್ ಕೋಡಿಯಾಲ್ ಬೈಲ್ ನಿರ್ದೇಶನದಲ್ಲಿ ಮೂಡಿಬಂದಿರುವ ನಾಟಕ….
ಪುತ್ತೂರಿನ ಶಕ್ತಿ ಗೆಳೆಯರ ಬಳಗದ ವತಿಯಿಂದ ಆಯೋಜನೆ…
ಪುತ್ತೂರು: ಶಕ್ತಿ ಗೆಳೆಯರ ಬಳಗ ಪುತ್ತೂರು ಇದರ ಸಾರಥ್ಯದಲ್ಲಿ “ಏಕತಾನತೆಗೆ ಎಂದೂ ಶರಣಾಗುವುದಿಲ್ಲ ಎನ್ನುವ ಪ್ರತಿಜ್ಞೆಯೊಂದಿಗೆ, ಕಲಾ ಸಂಗಮದ ಶಿವದೂತೆ ಗುಳಿಗೆ ತಂಡದಿಂದ ತುಳು ನಾಟಕ ಛತ್ರಪತಿ ಶಿವಾಜಿ ಜೂ.14ರ ಸಂಜೆ ಇಲ್ಲಿನ ಪುರಭವನದಲ್ಲಿ ಪ್ರದರ್ಶನ ಕಾಣಲಿದೆ.
ತುಳುನಾಡಿನ ಹೆಸರಾಂತ ನಿರ್ದೇಶಕ ವಿಜಯ ಕುಮಾರ್ ಕೋಡಿಯಾಲ್ ಬೈಲ್ ಇವರ ನಿರ್ದೇಶನದಲ್ಲಿ ಛತ್ರಪತಿ ಶಿವಾಜಿ ರಚನೆಗೊಂಡಿದೆ.
ಕಲಾ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತುಳು ಭಾಷೆಯ ನಾಟಕವನ್ನು ಬೆಂಬಲಿಸಿ, ಪ್ರೋತ್ಸಾಹಿಸುವಂತೆ ಶಕ್ತಿ ಗೆಳೆಯರ ಬಳಗ ವಿನಂತಿಸಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ 9972389511 ಅಥವಾ 9731768083 ಸಂಪರ್ಕಿಸುವಂತೆ ವಿನಂತಿಸಿದೆ.
ಟಿಕೆಟ್ ದರ ಒಂದು ಸಾವಿರ, ಐನೂರು ಮತ್ತು ಇನ್ನೂರ ಐವತ್ತು ಆಗಿದ್ದು, ಈಗಾಗಲೇ ಟಿಕೆಟ್ ಕೌಂಟರನ್ನು ಪುರಭವನ ಬಳಿಯಲ್ಲಿ ತೆರೆಯಲಾಗಿದೆಯೆಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.