ಪುತ್ತೂರು: ಸರಕಾರಿ ಶಾಲೆಗಳ ಸ್ಥಿತಿಗತಿ ಸೇರಿದಂತೆ ಪ್ರಸ್ತುತ ಸರಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಆ ಸಮಸ್ಯೆಗಳ ಬಗ್ಗೆ ಸರಕಾರಕ್ಕೊಂದು ಮನವಿಯನ್ನು ಹೇಳಹೊರಟಿರುವ ‘ಪೆನ್ಸಿಲ್ ಬಾಕ್ಸ್’ ಖ್ಯಾತಿಯ ರಝಾಕ್ ಪುತ್ತೂರು ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ‘ಸ್ಕೂಲ್ ಲೀಡರ್’ ಪುತ್ತೂರಿನ ಭಾರತ್ ಸಿನೆಮಾಸ್ನಲ್ಲಿ ಯಶಸ್ವಿ 3ನೇ ವಾರಕ್ಕೆ ಪ್ರದರ್ಶನ ಕಾಣುತ್ತಿದೆ.
ರಂಗಭೂಮಿ ಕಲಾವಿದರಾದ ಬೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ದೀಪಕ್ ಪಾಣಾಜೆ ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯ ನಟ ರಮೇಶ್ ಭಟ್, ಪೆನ್ಸಿಲ್ ಬಾಕ್ಸ್ ಖ್ಯಾತಿಯ ದೀಕ್ಷಾ ಡಿ.ರೈ ಪುತ್ತೂರು ಸೇರಿದಂತೆ ಹಲವು ಹಿರಿಯ ಕಿರಿಯ ಕಲಾವಿದರು ನಟಿಸಿರುವ ಸ್ಕೂಲ್ ಲೀಡರ್ ಪ್ರತಿಯೊಬ್ಬರು ಕುಟುಂಬ ಸಮೇತರಾಗಿ ನೋಡಬಹುದಾದ ಸಿನಿಮಾವಾಗಿದೆ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸು ಮುದ್ದು ಮುದ್ದಾದ ಮಕ್ಕಳ ನಟನೆ ನಿಜಕ್ಕೂ ಸೂಪರ್. ಕನ್ನಡ ಚಿತ್ರರಂಗದಲ್ಲೇ ಹೆಸರು ಪಡೆದ ‘ ಚಿನ್ನಾರಿ ಮುತ್ತಾ’ದ ನಂತರ ಮತ್ತೊಂದು ಮಕ್ಕಳ ಚಿತ್ರ ‘ಸ್ಕೂಲ್ ಲೀಡರ್’ ಎಂದರೆ ತಪ್ಪಾಗಲಾರದು. ಸಂಗೀತ, ಸಾಹಿತ್ಯ, ಸಂಭಾಷಣೆ, ನಿರ್ದೇಶನ ಎಲ್ಲದರಲ್ಲೂ ಸೈ ಎನಿಸಿಕೊಂಡಿರುವ ಸ್ಕೂಲ್ ಲೀಡರ್ ಸರಕಾರಿ ಶಾಲೆಗಳ ಸಮಸ್ಯೆಗಳಿಗೊಂದು ಪರಿಹಾರ ಕೊಡಬಲ್ಲುದೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕಾಗಿದೆ.
ಭಾರತ್ ಸಿನೆಮಾಸ್ನಲ್ಲಿ ಯಶಸ್ವಿ ಪ್ರದರ್ಶನ
ಪುತ್ತೂರು ಭಾರತ್ ಸಿನೆಮಾಸ್ನಲ್ಲಿ 3ನೇ ವಾರಕ್ಕೆ ಪ್ರರ್ದಶನ ಕಾಣುತ್ತಿದ್ದು ಪ್ರತಿ ದಿನ ಬೆಳಿಗ್ಗೆ 10.45, ಮಧ್ಯಾಹ್ನ 1.30, ಸಂಜೆ 4.45 ಹಾಗೂ 7.30ಕ್ಕೆ ಪ್ರದರ್ಶನ ಕಾಣುತ್ತಿದೆ.