ಒಡಿಯೂರು ಶ್ರೀಗಳ ಜನ್ಮ ದಿನೋತ್ಸವ, ಸೇವಾ ಸಂಭ್ರಮ ಗ್ರಾಮೋತ್ಸವ 2025 – ಸ್ವಚ್ಛತಾ ಕಾರ್ಯಕ್ರಮ ಹಿನ್ನಲೆ ಪೂರ್ವಭಾವಿ ಸಭೆ

0

ಪುತ್ತೂರು: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಜನ್ಮ ದಿನೋತ್ಸವ, ಸೇವಾ ಸಂಭ್ರಮ ಗ್ರಾಮೋತ್ಸವ 2025 ಇದರ ಬಗ್ಗೆ ಪುತ್ತೂರು ತಾಲೂಕಿನಾದ್ಯಂತ ಆ.3ರಂದು ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯನ್ನು ಶ್ರೀ ಲಕ್ಷ್ಮಿ ಹೋಟೆಲ್ ನಲ್ಲಿ ಸುಧೀರ್ ನೋಂಡಾರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಗ್ರಾಮವಿಕಾಸ ಕೇಂದ್ರದ ಯೋಜನಾಧಿಕಾರಿಗಳಾದ ಮಹಾಂತೇಶ ಭಂಡಾರಿ ಅವರು ಶ್ರೀ ಕ್ಷೇತ್ರ ಒಡಿಯೂರಿನಲ್ಲಿ ನಡೆಸಲ್ಪಡುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಆ.೩ ರಂದು ಎಲ್ಲಾ ಕಡೆಗಳಲ್ಲೂ ಸುಮಾರು 350 ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಮಾಹಿತಿ ನೀಡಿದರು

ಗ್ರಾಮೋತ್ಸವ ಹಾಗೂ ಶ್ರೀ ಸಂಸ್ಥಾನದ ಸಹ ಸಂಸ್ಥೆಗಳ ರಜದ ಸಂಭ್ರಮ ರಾಜ್ಯದ ಸಂಭ್ರಮದ ಪ್ರಯುಕ್ತ ಸೇವಾ ಚಟುವಟಿಕೆಗಳನ್ನು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದ್ದು, ತತ್ಸ್ ಸಂಬಂಧವಾಗಿ 25 ವರ್ಷಗಳಿಂದ ಗ್ರಾಮೋತ್ಸವ ಸಂದರ್ಭದಲ್ಲಿ ನಡೆಸುತ್ತಿರುವ ಸ್ವಚ್ಛತಾ ಕಾರ್ಯಕ್ರಮವನ್ನು ಈ ವರ್ಷ ಸ್ವಚ್ಛತಾ ಆಂದೋಲನವಾಗಿ ಆ.೩ ಆದಿತ್ಯವಾರ ಏಕಕಾಲದಲ್ಲಿ ಪುತ್ತೂರಿನಾದ್ಯಂತ 100 ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಪೂರ್ವಭಾವಿ ಸಭೆ ನಡೆಸಿ ಜೂನ್ 25ನೇ ತಾರೀಖಿನಂದು ಎಲ್ಲರೂ ಒಟ್ಟು ಸೇರಿ ಎಲ್ಲೆಲ್ಲಿ ಸ್ವಚ್ಛತ ನಡೆಸುವ ಬಗ್ಗೆ ಮುಂದಿನ ಸಭೆ ನಡೆಸಲಾಗುವುದೆಂದು ತಿಳಿಸಲಾಯಿತು.

ಈ ಸಭೆಯಲ್ಲಿ ದೇವಿ ಪ್ರಸಾದ ಶೆಟ್ಟಿ, ಮಂಗಳೂರು ಜಯಪ್ರಕಾಶ್ ರೈ, ವಿಶ್ವನಾಥ ಶೆಟ್ಟಿ, ಭವಾನಿ ಶಂಕರ್ ಶೆಟ್ಟಿ, ಮೋನಪ್ಪ ಪೂಜಾರಿ, ಮನ್ಮಥ ಶೆಟ್ಟಿ, ಅಶೋಕ್ ಕುಮಾರ್ ರೈ, ಗ್ರಾಮ ವಿಕಾಸ ಯೋಜನಾ ಮೇಲ್ವಿಚಾರಕಿ ಸವಿತಾ ರೈ, ವಜ್ರಮಾತ ವಿಕಾಸ್ ಕೇಂದ್ರ ಅಧ್ಯಕ್ಷ ನಯನರೈ, ಕಾರ್ಯದರ್ಶಿ ಶಾರದ ಕೇಶವ್, ಗ್ರಾಮ ವಿಕಾಸ ಸೇವಾ ನಿರತರು, ಬ್ಯಾಂಕಿನ ಮ್ಯಾನೇಜರ್ ಪವಿತ್ರ ಪ್ರಸಾದ್, ಡಾಕ್ಟರ್ ಕಿಶನ್ ಕುಮಾರ್, ಗುರುದೇವ ಸೇನಾ ಬಳಗದ ಸದಸ್ಯರು, ವಜ್ರಮಾತ ಸದಸ್ಯರು ಉಪಸ್ಥಿತರಿದ್ದರು. ಭಾರತಿ ರೈ ಪ್ರಾರ್ಥಿಸಿದರು.
ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.

LEAVE A REPLY

Please enter your comment!
Please enter your name here