ಪುತ್ತೂರು ನಗರಸಭೆಯಲ್ಲಿ ಬಿಜೆಪಿ ಆಡಳಿತದಿಂದ ಜನವಿರೋಧಿ ಶುಲ್ಕ ನೀತಿ – ಕಾಂಗ್ರೆಸ್ ಸದಸ್ಯರ ತುರ್ತು ಸಭೆ ಕರೆದ ಶಾಸಕ ಅಶೋಕ್ ರೈ

0

ಪುತ್ತೂರು: ಪುತ್ತೂರು ನಗರಸಭೆಯಲ್ಲಿ ಆಡಳಿತ ಪಕ್ಷವಾದ ಬಿಜೆಪಿಯಿಂದ ಹೊಸ ಶುಲ್ಕ ನೀತಿಯನ್ನು ಜಾರಿಗೆ ತಂದಿದ್ದು, ಇದು ಜನವಿರೋಧಿ ನೀತಿಯಾಗಿದ್ದು ಇದರ ಬಗ್ಗೆ ಚರ್ಚೆ ನಡೆಸಲು ಪುತ್ತೂರು ಶಾಸಕರು ನಗರಸಭಾ ಕಾಂಗ್ರೆಸ್ ಸದಸ್ಯರ ತುರ್ತು ಸಭೆಯನ್ನು ಮಂಗಳವಾರ ಕರೆದಿದ್ದಾರೆ.

ಸಭೆಯಲ್ಲಿ ನಗರಸಭಾ ಬಡವರ ವಿರೋಧಿ ಆಡಳಿತ ನೀತಿಯನ್ನು ಖಂಡಿಸಲಾಯಿತು. ನಗರಸಭೆಯ ಹೊಸ ಉದ್ಯಮ ಶುಲ್ಕ ಮತ್ತು ಘನತ್ಯಾಜ್ಯ ಶುಲ್ಕ ನೀತಿ ಪೂರ್ಣವಾಗಿ ಜನವಿರೋಧಿಯಾಗಿದೆ. ಈ ಹಿಂದೆ ಜಾರಿಯಲ್ಲಿದ್ದ ಶುಲ್ಕಕ್ಕಿಂದ ದುಪ್ಪಟ್ಟು ಶುಲ್ಕವನ್ನು ವಸೂಲಿ ಮಾಡಲು ನಗರಸಭೆ ತೀರ್ಮಾನ ಕೈಗೊಂಡಿದ್ದು, ಸಣ್ಣ ಬಡ ವ್ಯಾಪಾರಸ್ಥರಿಗೆ ಇದರಿಂದ ತೀವ್ರ ತೊಂದರೆಯಾಗಲಿದೆ. ಜನವಿರೋಧಿ ಹೊಸ ನೀತಿಯನ್ನು ಶಾಸಕರು ಸೇರಿದಂತೆ ಕಾಂಗ್ರೆಸ್ ಸದಸ್ಯರು ಖಂಡಿಸಿದರು. ನಗರಸಭೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಜನರ ಕಷ್ಟಗಳಿಗೆ ನೆರವಾಗುವ ಬದಲು ಬಡವರನ್ನು ಇನ್ನಷ್ಟು ಕೂಪಕ್ಕೆ ತಳ್ಳುವ ಹೊಸ ಶುಲ್ಕ ನೀತಿಯನ್ನು ಆಡಳಿತ ಜಾರಿ ಮಾಡಿದೆ. ಇದರ ವಿರುದ್ದ ಜನತೆಗೆ ತಿಳಿಸುವ ಕಾರ್ಯ ಮತ್ತು ಬಿಜೆಪಿ ಎಂದೆಂದೂ ಜನರ ಪರ ಅಲ್ಲ ಅದು ಉಳ್ಳವರ ಪರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಇದರ ವಿರುದ್ದ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. 450 ಚ.ಅ. ಕಟ್ಟಡಕ್ಕೆ ಘನತ್ಯಾಜ್ಯ ಶುಲ್ಕ ಈ ಹಿಂದೆ ಹಿಂದೆ ಶುಲ್ಕವನ್ನು ದುಪ್ಪಟ್ಟು ಏರಿಕೆ ಮಾಡಲಾಗಿದ್ದು ಇದನ್ನು ಸಭೆಯಲ್ಲಿ ಖಂಡಿಸಲಾಯಿತು.

ಏರಿಕೆ ಮಾಡಿದ್ದು ಬಿಜೆಪಿ, ಆಡಳಿತ ಕಾಂಗ್ರೆಸ್ ಮೇಲೆ ಗೂಬೆ
ನಗರಸಭೆಯಲ್ಲಿ ಆಡಳಿತ ನಡೆಸುತ್ತಿರುವುದು ಬಿಜೆಪಿ , ಶುಲ್ಕವನ್ನು ಏರಿಕೆ ಮಾಡಿದ್ದು ಬಿಜೆಪಿ ಆಡಳಿತ, ಆದರೆ ಜನರಲ್ಲಿ ತಪ್ಪು ಭಾವನೆ ಸೃಷ್ಟಿಸುವ ನಿಟ್ಟಿನಲ್ಲಿ ಬಿಜೆಪಿಗರು ಇದು ರಾಜ್ಯ ಸರಕಾರದ ಆದೇಶದಂತೆ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ವ್ಯಾಪಾರಸ್ಥರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ರಾಜ್ಯ ಸರಕಾರದಿಂದ ಈ ರೀತಿಯ ಯಾವುದೇ ಆದೇಶ ಬಂದಿಲ್ಲ, ಜನವಿರೋಧಿ ಆದೇಶವನ್ನು ಕಾಂಗ್ರೆಸ್ ಸರಕಾರ ಎಂದೂ ಮಾಡುವುದಿಲ್ಲ. ಜನರ ಮೇಲೆ ಭಾರ ಹಾಕಿ ಅದನ್ನು ಕಾಂಗ್ರೆಸ್ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದು ಹೇಸಿಗೆ ರಾಜಕೀಯ ಎಂದು ಶಾಸಕರು ಸಭೆಯಲ್ಲಿ ಹೇಳಿದರು.


ಸಭೆಯಲ್ಲಿ ನಗರಸಭಾ ಸದಸ್ಯರಾದ ರಿಯಾಝ್ ಪರ್ಲಡ್ಕ, ಶೈಲ ಪೈ, ನಾಮನಿರ್ದೇಶಿತ ಸದಸ್ಯರಾದ ಬಶೀರ್ ಪರ್ಲಡ್ಕ, ಶರೀಫ್ ಬಲ್ನಾಡು, ಶಾರದಾ ಅರಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಉಪಸ್ಥಿತರಿದ್ದರು.


ಎಲ್ಲೂ ಜಾರಿಯಲ್ಲಿಲ್ಲದ ಹೊಸ ಶುಲ್ಕ ನೀತಿಯನ್ನು ನಗರಸಭೆಯ ಬಿಜೆಪಿ ಆಡಳಿತ ಜಾರಿಗೆ ತಂದಿದೆ. ದೊಡ್ಡ ಉದ್ಯಮಿಗಳಿಗೆ ಶುಲ್ಕ ವಸೂಲಿ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸಣ್ಣ ವ್ಯಾಪಾರಿಗಳನ್ನು ಹೊಸ ಶುಲ್ಕ ನೀತಿಗೆ ಅಳವಡಿಸಿದ್ದು ಖಂಡನೀಯ. ದಿನಕ್ಕೆ 3೦೦೦ ವ್ಯವಹಾರ ಮಾಡುವ ಬಡ ವ್ಯಾಪಾರಿಗಳ ಮೇಲೆ ಉದ್ಯಮ ಶುಲ್ಕ, ಘನತ್ಯಾಜ್ಯ ಶುಲ್ಕವನ್ನು ದುಪ್ಪಟ್ಟು ಮಾಡುವ ಮೂಲಕ ಬಿಜೆಪಿ ಬಡವರ ವಿರೋಧಿ ಎಂಬುದನ್ನು ಮತ್ತೆ ಸಾಬೀತು ಮಾಡಿದೆ. ಇದರ ವಿರುದ್ದ ಹೋರಾಟ ನಡೆಸಲಾಗುವುದು. ಬಡವರಿಗೆ ಅನ್ಯಾಯವಾದರೆ ಅದನ್ನು ಸಹಿಸುವ ಪ್ರಶ್ನೆಯೇ ಇಲ್ಲ.
ಅಶೋಕ್ ರೈ, ಶಾಸಕರು, ಪುತ್ತೂರು

LEAVE A REPLY

Please enter your comment!
Please enter your name here