ಸವಣೂರು: ಜೂನ್ 19 ವಿಶ್ವ ಓದುಗರ ದಿನದ ಪ್ರಯುಕ್ತ ವಿಶೇಷ ಸಂಗಮ ಜೂ.19ರಂದು ಚಾಪಲ್ಲ ದರ್ಸ್ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬಹು।ಉಸ್ತಾದ್ ಅಶ್ರಫ್ ಫಾಝಿಲ್ ಬಾಖವಿ ಉದ್ಘಾಟಿಸಿ, ಓದುವುದರಿಂದ ಭಾಷಾಶುದ್ದತೆ, ಚಿಂತನೆ ಮತ್ತು ಉತ್ತಮ ಜ್ಞಾನ ಅಳವಡಿಸಲು ಸಾಧ್ಯ, ಓದುವಿಕೆ ಒಂದು ಸಮುದಾಯ ಬೆಳೆಯುವಿಕೆಗೆ ನೀಡುವ ಇಂಧನವಾಗಿದೆ ಸಮಸ್ತದ ಬಹಳಷ್ಟು ಪಂಡಿತರು ಬಹುಭಾಷೆಯುಳ್ಳವರಾದದ್ದು ಓದುವಿಕೆಯಿಂದಾಗಿದೆ ಎಂದರು.
ದರ್ಸಿನ ಗೌರವ ಸಲಹೆಗಾರ ಬಹು। ಸಯ್ಯಿದ್ ಮುಈನ್ ತಂಙಳ್ ಸಾಲ್ಮರ ಮಾತನಾಡಿ, ಇಸ್ಲಾಂ ಓದುವಿಕೆಗೆ ಬಹಳಷ್ಟು ಪ್ರಾಮುಖ್ಯತೆ ಕಲ್ಪಿಸಿದೆ ಇಸ್ಲಾಮಿನ ದೈವಗ್ರಂಥಗಳಲ್ಲಿ ಅತ್ಯಂತ ಶ್ರೇಷ್ಟವಾದ ಖುರ್ಆನಿನ ಮೊದಲ ಅವತೀರ್ನವೇ ‘ನೀ ಓದು’ ಎಂದಾಗಿದೆ, ಪ್ರಸ್ತುತ ಕಾಲದಲ್ಲಿ ಓದುವಿಕೆ ಬಹಳ ವಿರಳ ಸಾಮಾಜಿಕ ಜಾಲತಾಣಗಳಲ್ಲಿ ಗುಲಾಮರಾದ ವಿದ್ಯಾರ್ಥಿ ಮತ್ತು ಯುವಸಮೂಹ ಓದುವಿಕೆಯ ದಾರಿಯನ್ನು ಪ್ರಯೋಗಿಸಿ ಜೀವನದ ಗುರಿ ಸಾರ್ಥಕಗೊಳಿಸಲು ಮುಂದೆಜ್ಜೆ ಇಡಬೇಕು ಎಂದರು. ದರ್ಸಿನ ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಶುಭಹಾರೈಸಿದರು.