ಪುತ್ತೂರು:ನಾಥ ಪಂಥೀಯ ಜೋಗಿ ಸಮಾಜ ಸುಧಾರಕ ಸಂಘದದ ವತಿಯಿಂದ ನಡೆಯಲಿರುವ 7ನೇ ವರ್ಷದ ಕೆಸರುಗದ್ದೆ ಕ್ರೀಡೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯು ಜೂ.22ರಂದು ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.
ಸಂಘದ ಅಧ್ಯಕ್ಷ ನವೀನ್ ಡಿ. ದೋಳ್ತಟ್ಟ, ಸಂಚಾಲಕ ದಯಾನಂದ ಪುತ್ತೂರಮೂಲೆ, ಪ್ರಧಾನ ಕಾರ್ಯದರ್ಶಿ ಮೋನಪ್ಪ ಪುರುಷ ಮುಗೇರಡ್ಕ, ಉಪಾಧ್ಯಕ್ಷ ಆನಂದ ಮಣಿಯ, ಖಜಾಂಚಿ ಜಗನ್ನಾಥ ನೆಲ್ಲಿಕಟ್ಟೆ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿಠಲ ಮುಕ್ವೆ, ರಘು ಮಣಿಯ, ಜಗನ್ನಾಥ ಪರ್ಲಡ್ಕ, ಜಯರಾಮ ಮರೀಲ್, ಗಂಗಾಧರ ಮುಗೇರಡ್ಕ, ಸಮಾಜ ಬಾಂಧವರಾದ ಹರೀಶ್ಚಂದ್ರ ಮಾಯಂಗಲ, ಲೋಕೇಶ್ ಕುಜುಮಗದ್ದೆ, ವಿನೋದ್ ಮುಗೇರಡ್ಕ ಉಪಸ್ಥಿತರಿದ್ದರು.