ವಾಸುಕಿ ನಾಗ ಸನ್ನಿಧಿ ಮೂಲ ನಾಗಸನ್ನಿಧಿಗೆ ಸೇರುವುದು, ನವಗ್ರಹ ಗುಡಿ ದೇವಳದ ಒಳಾಂಗಣಕ್ಕೆ ಅಯ್ಯಪ್ಪ ಗುಡಿ ಸಂಕಲ್ಪ ಮಾಡಿದ ಸ್ಥಳಕ್ಕೆ ಸ್ಥಳಾಂತರ ಪರಿಹಾರ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನ ಕಟ್ಟಡ ಶಿವನ ದೃಷ್ಟಿ ಸಂಚಾರಕ್ಕೆ ಅಡಚಣೆಯಾಗಿದೆ. ಈ ಕಟ್ಟಡಕ್ಕೆ ಯಾವುದೇ ಪರಿಹಾರವಿಲ್ಲ. ಇನ್ನು ಇದನ್ನು ತೆಗೆಯುವುದೇ ಪರಿಹಾರ. ದೈವಬಲವುಂಟು ಎಂದು ದೈವಜ್ಞ ನಿಟ್ಟೆ ಪ್ರಸನ್ನ ಆಚಾರ್ಯ ಅವರು ಪ್ರಶ್ನಾಚಿಂತನೆಯಲ್ಲಿ ನುಡಿದರು. ಇದರ ಜೊತೆಗೆ ವಾಸುಕಿ ನಾಗ ಸನ್ನಿಧಿ ಮೂಲ ನಾಗಸನ್ನಿಧಿಗೆ ಸೇರುವುದು, ನವಗ್ರಹ ಗುಡಿ ದೇವಳದ ಒಳಾಂಗಣಕ್ಕೆ ಮತ್ತು ಅಯ್ಯಪ್ಪ ಸನ್ನಿಧಿಯನ್ನು ಆರಂಭದ ಕಾಲದಲ್ಲಿ ಸಂಕಲ್ಪ ಮಾಡಿದ ಸ್ಥಳಕ್ಕೆ ಸ್ಥಳಾಂತರ ಮಾಡುವುದೇ ಪರಿಹಾರ ಎಂದು ತಿಳಿಸಿದರು.

ದೇವಳದ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಶಾಸಕರ ಸೂಚನೆಯಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ಜೂ.24ರಂದು ನಡೆದ ಒಂದು ದಿನದ ಪ್ರಶ್ನಾ ಚಿಂತನೆಯಲ್ಲಿ ನಿವೃತ್ತಿ ರಾಶಿಯಲ್ಲಿ ದೈವಜ್ಞರು ನುಡಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ ವಿ, ಈಶ್ವರ ಬೆಡೇಕರ್, ವಿನಯ ಸುವರ್ಣ, ಸುಭಾಷ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ, ನಳಿನಿ ಪಿ ಶೆಟ್ಟಿ, ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
