ಪುತ್ತೂರು :ಎಕ್ಕಡ್ಕ ಪ್ರಾ.ಶಾಲೆ ಶಾಲಾ ಮಂತ್ರಿಮಂಡಲ ರಚನೆ ನಡೆಯಿತು. ಶಾಲಾ ನಾಯಕನಾಗಿ ಐದನೇ ತರಗತಿಯ ಮಾಹಿತ್ ಸೂಧನ್, ಶಾಲಾ ನಾಯಕಿಯಾಗಿ ಐದನೇ ತರಗತಿಯ ಜುಮೈಲಾ ಆಯ್ಕೆಯಾದರು.
ಶಿಕ್ಷಣ ಮಂತ್ರಿಯಾಗಿ ಐದನೇ ತರಗತಿಯ ತ್ರಿಶಾಂತ್. ಕೆ ಮತ್ತು ಉಪ ಶಿಕ್ಷಣ ಮಂತ್ರಿಯಾಗಿ ನಾಲ್ಕನೇ ತರಗತಿಯ ಚಿನ್ಮಯಿ.ಕೆ , ಶಿಸ್ತಿನ ಮಂತ್ರಿಯಾಗಿ ಐದನೇತರಗತಿಯ ಗೌರವ್. ಡಿ. ಉಪಶಿಸ್ತಿನ ಮಂತ್ರಿಗಳಾಗಿ 4 ನೇ ತರಗತಿಯ ತನ್ಯ ಪಿ. ವಿ ಮತ್ತು ಕೀರ್ತಿಕಾ , ಆರೋಗ್ಯ ಮತ್ತು ಆಹಾರ ಮಂತ್ರಿಯಾಗಿ 5ನೇ ತರಗತಿಯ ಅಬ್ದುಲ್ ಹಾತಿಮ್ , ಉಪ ಆರೋಗ್ಯ ಮಂತ್ರಿಗಳಾಗಿ 4ನೇ ತರಗತಿಯ ಪೂರ್ವಿ ಮತ್ತು ಗಮ್ಯ , ಗ್ರಂಥಾಲಯ ಮಂತ್ರಿಯಾಗಿ 5 ನೇ ತರಗತಿಯ ವಂಶಿಕಾ ಮತ್ತು ಉಪ ಗ್ರಂಥಾಲಯ ಮಂತ್ರಿಯಾಗಿ 4 ನೇ ತರಗತಿಯ ನವಾಜ್ , ಸ್ವಚ್ಛತಾ ಮಂತ್ರಿಯಾಗಿ 5 ನೇ ತರಗತಿಯ ಆದ್ಯ, ಉಪ ಸ್ವಚ್ಛತಾ ಮಂತ್ರಿಗಳಾಗಿ 4ನೇ ತರಗತಿಯ ಪ್ರಣವ್ ಮತ್ತು ವರುಣ್ , 5 ನೇ ತರಗತಿಯ ಸೃಜನ್ , ನೀರಾವರಿ ಮಂತ್ರಿಆಗಿ ರೇಖಾ 3 ನೇ ತರಗತಿಯ ಅಹಮದ್ ಸಾಬೀತ್, ಪೂರ್ವಿ. ಕೆ. ಫಾತಿಮಾ ,ಆಧ್ಯ ಮತ್ತು ಅಬೂಬ್ಬಕರ್ ಸಿದ್ದಿಕ್ ಮಂತ್ರಿಗಳಾಗಿ ಆಯ್ಕೆಯಾದರು.
ಇ ವಿ ಎಂ ಮೊಬೈಲ್ ಆಪ್ ಬಳಸಿ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು ಶಾಲಾ ಶಿಕ್ಷಕರು ಮತಗಟ್ಟೆ ಅಧಿಕಾರಿಗಳಾಗಿ ಸಹಕರಿಸಿದರು.