ಉಪ್ಪಿನಂಗಡಿ: ಕರಾಯ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸಾರ್ವಜನಿಕ ಶತರುದ್ರಾಭೀಷೇಕ ಹಾಗೂ ತೀರ್ಥ ಮಂಟಪದ ಅನುಜ್ಞಾ ಕಲಶ ಕಾರ್ಯಕ್ರಮ ನಡೆಯಿತು.

ವೈದಿಕ ವಿಧಿ ವಿಧಾನವನ್ನು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅನಂತಕೃಷ್ಣ ಕುದ್ದಾಣ್ಣಾಯ ಸದಸ್ಯರಾದ ಜಯವಿಕ್ರಮ ಕಲ್ಲಾಪು, ಕುಶಾಲಪ್ಪ ಗೌಡ, ಸೂರ, ದಯಾನಂದ ಪೂಜಾರಿ, ನಂದಿನಿ, ತೇಜಸ್ವಿನಿ, ಅರ್ಚಕ ಶಶಿಕಾಂತ್ ರಾವ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುದರ್ಶನ್ ಕೊಲ್ಲಿ, ಪ್ರಮುಖರಾದ ಸಾಮ್ರಾಟ್ ಕರ್ಕೇರ, ಯುವರಾಜ್ ಅನಾರ್, ನವೀನ, ಅಣ್ಣು ಗೌಡ, ಸುಧೀರ್ ಕುಮಾರ್ ಹಲೇಜಿ, ದುರ್ಗೇಶ್ ಕೆದಿಲಾಯ, ರಾಜಶೇಖರ್ ರೈ, ಸುರೇಶ್ ಕೆ., ಸೀತಾರಾಮ, ಕಿಶೋರ್, ಹೇಮಾವತಿ, ಬೂದ, ಜಗದೀಶ್ ಶೆಟಿ ಮೈರ, ಜನಾರ್ದನ ಮೊದಲಾದವರು ಉಪಸ್ಥಿತರಿದ್ದರು.