ಬಿಜೆಪಿ ಕೊಯಿಲ ಗ್ರಾಮದ ಸಬಳೂರು‌ ಬೂತ್ ಸಮಿತಿ ವತಿಯಿಂದ ಗುರುಪೂರ್ಣಿಮೆ ಪ್ರಯುಕ್ತ ಗುರುವಂದನೆ

0

ಕಡಬ: ಬಿಜೆಪಿ ಕೊಯಿಲ ಗ್ರಾಮದ ಸಬಳೂರು‌ ಬೂತ್ ಸಮಿತಿ ವತಿಯಿಂದ ಗುರುಪೂರ್ಣಿಮೆ ಪ್ರಯುಕ್ತ ಕೊಯಿಲ ಗ್ರಾಮದ ಪರಂಗಾಜೆ ನಿವಾಸಿ, ಪುತ್ತೂರು‌ ಶ್ರೀ ಮಹಾಲಿಂಗೇಶ್ವರ ಐಟಿಐ ನಿವೃತ್ತ ಪ್ರಾಂಶುಪಾಲ ಭವಾನಿಶಂಕರ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಬಳೂರು ಬೂತ್ ಸಮಿತಿ ಅಧ್ಯಕ್ಷ ,ಕೊಯಿಲ ಗ್ರಾ.ಪಂ ಸದಸ್ಯ ಚಿದಾನಂದ ಪಾನ್ಯಾಲು, ಕೊಯಿಲ ಗ್ರಾ.ಪಂ ಮಾಜಿ ಸದಸ್ಯರಾದ ತಿಮ್ಮಪ್ಪ ಸಂಕೇಶ, ಉಮೇಶ್ ಸಂಕೇಶ, ,ಬಿಜೆಪಿ ಕೊಯಿಲ ಮಹಾಶಕ್ತಿ ಕೇಂದ್ರದ ಪ್ರದಾನ ಕಾರ್ಯದರ್ಶಿ ರಾಮಚಂದ್ರ ನಾಯ್ಕ,‌ ಪ್ರಮುಖರಾದ ಗಣೇಶ್ ಎರ್ಮಡ್ಕ, ರವೀಂದ್ರ ಸಂಕೇಶ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here