ಉಪ್ಪಿನಂಗಡಿ: ನಿಲ್ಲಿಸಿದ್ದ ಓಮ್ನಿ ಕಾರೊಂದು ಬೆಂಕಿ ಹತ್ತಿಕೊಂಡು ಉರಿದ ಘಟನೆ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಮಜಿಕುಡೆ ಎಂಬಲ್ಲಿ ನಡೆದಿದೆ.

ಮಜಿಕುಡೆ ನಿವಾಸಿ ವಿಶ್ವನಾಥ ಗೌಡ ಅವರು ತನ್ನ ಮಾಲಕತ್ವದ ಕಾರನ್ನು ಅವರ ಮನೆಯ ಕಾರ್ ಶೆಡ್ನಲ್ಲಿ ನಿಲ್ಲಿಸಿದ್ದರು. ಜು.16ರಂದು ಬೆಳಗ್ಗಿನ ಜಾವ ಸುಟ್ಟ ವಾಸನೆ ಬಂದಾಗ ಅವರು ಬಾಗಿಲು ತೆರೆದು ನೋಡಿದ್ದು, ಆಗ ಓಮ್ನಿ ಕಾರು ಬೆಂಕಿ ಹತ್ತಿಕೊಂಡು ಉರಿಯುತ್ತಿರುವುದು ಕಂಡು ಬಂತು. ಕೂಡಲೇ ಅವರು ನೀರು ಹಾಕಿ ಬೆಂಕಿ ನಂದಿಸಿದ್ದು, ಆದರೂ ಕಾರು ಭಾಗಶಃ ಸುಟ್ಟು ಹೋಗಿದೆ. ಈ ಬಗ್ಗೆ ವಿಶ್ವನಾಥ ಗೌಡ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ.