ರಾಮಕುಂಜ: ಕೊಯಿಲ ಶಕ್ತಿ ಕೇಂದ್ರ ವ್ಯಾಪ್ತಿಯ ವಳಕಡಮ ಬೂತ್ ಸಂಖ್ಯೆ 4ರ ಬೂತ್ ಸಮಿತಿ ಸಭೆ ಪಾಣಿಗ ಸದಾನಂದ ದಾಸ್ ರವರ ಮನೆಯಲ್ಲಿ ಜರಗಿತು.

ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಸುಳ್ಯ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ದ.ಕ ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಎಂ.ಆರ್. ಕೃಷ್ಣ, ಮಂಗಳೂರು ಮಂಡಲ ಯುವ ಮೋರ್ಚಾ ಅಧ್ಯಕ್ಷ ಮುರಳಿ, ಸುಳ್ಯ ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಹೇಮಾ ಮೋಹನ್ ದಾಸ್, ಕೊಯಿಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ರಾಮಚಂದ್ರ ಏಣಿತ್ತಡ್ಕ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಅಶೋಕ್ ಕೊಯಿಲ, ಮಾಜಿ ಅಧ್ಯಕ್ಷ ಧರ್ಮಪಾಲ್ ರಾವ್ ಕಜೆ, ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಯತೀಶ್ ಗುಂಡಿಜೆ, ನಿಕಟಪೂರ್ವ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಕೊಯಿಲ ಗ್ರಾ.ಪಂ.ಸದಸ್ಯರಾದ ಕಮಲಾಕ್ಷಿ, ಲತಾ, ಕೊಯಿಲ ಶಕ್ತಿ ಕೇಂದ್ರ ಪ್ರಮುಖ್ ಪ್ರಕಾಶ್ ಕೆ.ಆರ್., ಬೂತ್ ಅಧ್ಯಕ್ಷ ಸೀತಾರಾಮ ವಳಕಡಮ, ಮಲ್ಲಿಕಾ ಕರುಣಾಕರ ಚೌಟ, ವಸಂತ ಪೊಸಲಿಕ್ಕೆ, ಬೂತ್ ಕಾರ್ಯದರ್ಶಿ ಹರಿಶ್ಚಂದ್ರ ಮಾಳ, ಗ್ರಾ.ಪಂ.ಮಾಜಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಬಾಲಕೃಷ್ಣ ಗೌಡ ಬೇಂಗದಪಡ್ಪು, ಬಿಜೆಪಿ ಪ್ರಮುಖರಾದ ಲಕ್ಷ್ಮೀ ನಾರಾಯಣ ರಾವ್ ಆತೂರು, ಊರಿನ ಪ್ರಮುಖರಾದ ವೀರಪ್ಪ ದಾಸಯ್ಯ, ಸದಾನಂದ ದಾಸ್, ಪುರುಷೋತ್ತಮ, ಉಮೇಶ್ ನೂಜಿಮಾರ್, ಡಿ.ಟಿ.ಭಟ್, ಸಂಜೀವ ಗೌಡ ಕೊನೆಮಜಲು, ಕಾಳಪ್ಪ ಬರೆಮೇಲು, ವಿಶ್ವನಾಥ ಪುತ್ಯೆ ಸೀತಾರಾಮ ದರ್ಖಾಸು ಮತ್ತಿತರರು ಉಪಸ್ಥಿತರಿದ್ದರು.