ಇಚ್ಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ತಂಡದಿಂದ ತೆರವು
ನೆಲ್ಯಾಡಿ: ಭಾರೀ ಮಳೆ ಹಾಗೂ ಗಾಳಿಗೆ ಇಚ್ಲಂಪಾಡಿಯಲ್ಲಿ ವಿದ್ಯುತ್ ತಂತಿ ಮೇಲೆ ಮರಬಿದ್ದ ಘಟನೆ ನಡೆದಿದೆ.
ಇಚ್ಲಂಪಾಡಿ ಸಮೀಪದ ಕೆಡಂಬೇಲು -ಬಿಜೇರು ರಸ್ತೆಯಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದಿತು. ಈ ಕುರಿತು ಮಾಹಿತಿ ಪಡೆದ ಇಚ್ಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ಸಂಘಟನೆಯ ಅಧ್ಯಕ್ಷ ಜೋನ್ಸನ್ ಅವರ ನೇತೃತ್ವದಲ್ಲಿ ಸಂಘದ ಸದಸ್ಯರು ಸ್ಥಳಕ್ಕೆ ತೆರಳಿ ಮರ ತೆರವುಗೊಳಿಸಿದರು. ಮೆಸ್ಕಾಂ ಜೆ.ಇ.ರಮೇಶ್ ಹಾಗೂ ಪವರ್ಮ್ಯಾನ್ ಸಂಜು ಸಹಕರಿಸಿದರು.