ಪಿಎಂ ಕಿಸಾನ್ 20ನೇ ಕಂತಿನ ಹಣ ಬಂದಿಲ್ವಾ!? ಈ ರೀತಿ ಚೆಕ್ ಮಾಡಿಕೊಳ್ಳಿ

0

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Scheme) ಅಡಿ 20ನೇ ಕಂತಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ 20,500 ಕೋಟಿ ರೂ ಬಿಡುಗಡೆ ಮಾಡಿದರು. 9.7 ಕೋಟಿಗೂ ಅಧಿಕ ರೈತರಿಗೆ (Farmers) ಅವರ ಬ್ಯಾಂಕ್ ಖಾತೆಗೆ 2,000 ರೂ ಹಣ ನೇರವಾಗಿ ವರ್ಗಾವಣೆ ಆಗಿದೆ. ನರೇಂದ್ರ ಮೋದಿ ಉತ್ತರಪ್ರದೇಶದ ವಾರಾಣಸಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡಿದರು.

ಕೃಷಿಕರಿಗೆ ವ್ಯವಸಾಯಕ್ಕೆ ಅನುಕೂಲವಾಗಲೆಂದು ಸರ್ಕಾರ ವರ್ಷಕ್ಕೆ ಮೂರು ಬಾರಿ ಉಚಿತವಾಗಿ 2,000 ರೂ ಹಣವನ್ನು ಸಹಾಯವಾಗಿ ನೀಡುತ್ತದೆ. ಒಂದು ವರ್ಷದಲ್ಲಿ 6,000 ರೂ ಹಣ ಬಿಡುಗಡೆ ಆಗುತ್ತದೆ. 2019ರಲ್ಲಿ ಆರಂಭವಾದ ಈ ಸ್ಕೀಮ್​ನಲ್ಲಿ ಇಲ್ಲಿಯವರೆಗೆ 20 ಕಂತುಗಳು ಬಿಡುಗಡೆ ಆಗಿವೆ.

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 20ನೇ ಕಂತು ನಿಮ್ಮ ಖಾತೆಗೆಬಂದಿದೆಯೇ ಹೀಗೆ ಚೆಕ್ ಮಾಡಿ

– ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಕಂತು ಮೊತ್ತವು ನಿಮ್ಮ ಖಾತೆಗೆ ಜಮಾ ಆಗಿದ್ದರೆ, ಕ್ರೆಡಿಟ್ ಮೆಸೇಜ್ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ.

-ರೈತರು ಪಿಎಂ ಕಿಸಾನ್ ಪೋರ್ಟಲ್ ಮೂಲಕ ತಮ್ಮ ಖಾತೆಗೆ ಹಣ ತಲುಪಿದೆಯೇ ಎಂದು ಪರಿಶೀಲಿಸಬಹುದು .

– 20 ನೇ ಕಂತು ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು, ಮೊದಲು ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in/ ಗೆ ಹೋಗಬೇಕು .

– ಇದರ ನಂತರ, ಫಾರ್ಮರ್ ಕಾರ್ನರ್‌ಗೆ ಹೋಗಿ ಮತ್ತು ಬೆನೆಫಿಶಿಯರಿ ಸ್ಟೇಟಸ್ ಗೆ ಹೋಗಬೇಕು.

– ನೀವು ಬೆನೆಫಿಶಿಯರಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದ ನಂತರ, ಹೊಸ ಪುಟ ತೆರೆಯುತ್ತದೆ.

– ಈ ಪುಟದಲ್ಲಿ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

– ಒಮ್ಮೆ ಈ ಮಾಹಿತಿಯನ್ನು ಭರ್ತಿ ಮಾಡಿದರೆ, 20 ನೇ ಕಂತಿನ ಸ್ಥಿತಿ ನಿಮ್ಮ ಮುಂದೆ ಗೋಚರಿಸುತ್ತದೆ.

– ಇ-ಕೆವೈಸಿ, ಭೂ ಪರಿಶೀಲನೆ ಮತ್ತು ಆಧಾರ್-ಬ್ಯಾಂಕ್ ಸೀಡಿಂಗ್‌ನಲ್ಲಿ ‘ಹೌದು’ ಎಂದು ತೋರಿಸಿದರೆ, ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ ಅಥವಾ ಈಗಾಗಲೇ ಜಮಾ ಮಾಡಲಾಗಿದೆ ಎಂದರ್ಥ.

LEAVE A REPLY

Please enter your comment!
Please enter your name here