ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯ, ಉಪ್ಪಿನಂಗಡಿಯ ನೇತ್ರಾವತಿ ಸಭಾಭವನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರದ ಯೋಗ ಬಂಧುಗಳ ಸಾಮೂಹಿಕ ಯೋಗ ದುರ್ಗಾ ನಮಸ್ಕಾರ ಮತ್ತು ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ ಹಾಗೂ ಅರ್ಚನೆಯ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ 4.30ಕ್ಕೆ ಯೋಗಬಂಧುಗಳಿಂದ ಭಜನೆಯನ್ನು ನಮ್ಮ ಮನೆ ಹಾಗೂ ಪಾಂಡುರಂಗ ಶಾಖೆ ಗುರುವಾಯನಕೆರೆಯ ಯೋಗಬಂಧುಗಳು ನಡೆಸಿದರು., ಅಮೃತ ವಚನ ವಾಚನ ಹಾಗೂ ಪಂಚಾಂಗ ಪಠಣವನ್ನು ಸಹಸ್ರಲಿಂಗೇಶ್ವರ ಶಾಖೆಯ ಯೋಗಬಂಧುಗಳಾದ ಪ್ರದೀಪ್ ಮತ್ತು ವಿಜೇತ ನಡೆಸಿದರು.
ಮಾನಸಿಕ ಸಿದ್ಧತೆ, ಯೋಗ ಗಣಪತಿ ನಮಸ್ಕಾರದ ವಿವರಣೆಯನ್ನು ಸಹಸ್ರಲಿಂಗೇಶ್ವರ ಶಾಖೆಯ ಶಿಕ್ಷಕ ರಾಜೇಂದ್ರ ಭಟ್ ನಿರ್ವಹಿಸಿ, ಪ್ರಾತ್ಯಕ್ಷಿಕೆಯಲ್ಲಿ ಯೋಗಬಂಧುಗಳಾದ ಪೂರ್ವಿ, ಯಶನ್, ಹರೀಶ್ ಹಾಗೂ ಜಯಶ್ರೀ ಯವರು ಸಹಕರಿಸಿದರು.

ನಂತರ ಸಾಮೂಹಿಕ ಯೋಗ ದುರ್ಗಾ ನಮಸ್ಕಾರದ ಉದ್ಘಾಟನೆಯನ್ನು ದೀಪ ಪ್ರಜ್ವಲನೆಯ ಮೂಲಕ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಳದ ಪ್ರದಾನ ಅರ್ಚಕರಾದ ಹರೀಶ ಉಪಾಧ್ಯಾಯ ನೆರೆವೆರಿಸಿದರು. ಡಾ. ರಮ್ಯಾ ರಾಜಾರಾಮ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ, ಡಾ. ರಾಜಾರಾಮ್, ದಂತ ವೈದ್ಯರು ಉಪ್ಪಿನಂಗಡಿ ಗಾಣಿಗ ಶಾಖೆಯ ಹಿರಿಯ ಯೋಗ ಬಂಧು ರಾಜೇಶ್ ಶೆಟ್ಟಿ ಸಂಪ್ಯಾಡಿ, ಕಾರ್ಯಕ್ರಮ ಸಂಚಾಲಕರಾದ ಕೃಷ್ಣಪ್ಪಣ್ಣ ಉಪಸ್ಥಿತರಿದ್ದರು.
ಉಪ್ಪಿನಂಗಡಿ, ಸಹಸ್ರಲಿಂಗೇಶ್ವರ ಶಾಖೆಯ ಯೋಗ ಬಂಧು ಅವನೀಶ್ ರವರು ಬೌದ್ದಿಕ್ ನೀಡಿ ನವರಾತ್ರಿ ಆಚರಣೆಯ ವಿಶೇಷ ಹಾಗೂ ದುರ್ಗಾ ಮಾತೆಯ ಒಂಬತ್ತು ರೂಪಗಳ ಬಗ್ಗೆ ಮಾಹಿತಿ ನೀಡಿದರು.ನಂತರ 3 ಹಂತಗಳಲ್ಲಿ 9 ಬಾರಿ ಯೋಗ ದುರ್ಗಾ ನಮಸ್ಕಾರ ನಡೆಯಿತು ವಿವರಣೆಯಲ್ಲಿ ಯತೀಶ್, ಹೇಮಾವತಿ, ಹಾಗೂ ಗಿರೀಶ್ ನಿರ್ವಹಿಸಿ ಪ್ರತಿಮಾ, ಪ್ರಶಾಂತ್, ಶರ್ಮಿಳಾ, ಬಾಲಚಂದ್ರ, ಸುಧಾ, ಶಿವಪ್ರಸಾದ್, ಪ್ರಿಯಾ ಹಾಗೂ ಭುಜಂಗ ಪ್ರಾತ್ಯಕ್ಷತೆಯಲ್ಲಿ ಸಹಕರಿಸಿದರು. ಅಮೃತಾಸನವನ್ನು , ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರದ ಮಾರ್ಗದರ್ಶಕರಾದ ರವೀಶ್ ರವರು ನಡೆಸಿಕೊಟ್ಟರು.
ನಂತರ ಶ್ರೀ ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣವನ್ನು ಗಾಣಿಗ ಭವನ ಶಾಖೆ, ಉಪ್ಪಿನಂಗಡಿ ಹಾಗೂ ಶ್ರೀ ಭಾರತಿ ಶಾಖೆ, ಆಲಂಕಾರು ಇದರ ಯೋಗ ಬಂಧುಗಳು ನಡೆಸಿಕೊಟ್ಟರು.
ಕಾರ್ಯಕ್ರಮದ ನಿರೂಪಣೆಯನ್ನು ಪಾಂಡುರಂಗ ಶಾಖೆ, ಗುರುವಾಯನಕೆರೆಯ ಯೋಗಬಂಧು ಲತಾ ನಿರ್ವಹಿಸಿ , ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಉಪ್ಪಿನಂಗಡಿ ಶಿಕ್ಷಣ ಸಹಪ್ರಮುಖರಾದ ಕೃಷ್ಣಪ್ಪಣ್ಣ ವಂದಿಸಿದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ, ಆಲಂಕಾರು, ಕೊಯಿಲ, ನೆಲ್ಯಾಡಿ, ಗುರುವಾಯನಕೆರೆ, ಪೊಳಲಿ ಹಾಗೂ ಮಂಗಳೂರು ಭಾಗದ 291 ಯೋಗ ಬಂಧುಗಳು ಹಾಗೂ 45 ಯೋಗೇತರ ಬಂಧುಗಳು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಸಮಿತಿಯ ಮಂಗಳೂರು ಮಹಾನಗರ ಸಂಚಾಲಕರು, ಮಂಗಳೂರು ನಗರ ಪ್ರಮುಖರು, ಉಪ್ಪಿನಂಗಡಿ ನಗರ ಸಂಚಾಲಕರು, ನಗರ ಪ್ರಮುಖರುಗಳು ಹಾಗೂ ಶಾಖಾ ಶಿಕ್ಷಕರುಗಳು, ಮಾರ್ಗದರ್ಶನದಲ್ಲಿ ನಡೆಯಿತು.