ಮಹಾಲಿಂಗೇಶ್ವರ ದೇವಸ್ಥಾನಕ್ಕೆ 12 ಹಲಸಿನ ಮಣೆಗಳ ಸಮರ್ಪಣೆ

0


ಪುತ್ತೂರು: ಪುತ್ತೂರು ಮಂಗಳವುಡ್ ಫರ್ನಿಚರ್‍ಸ್‌ನ ಮಾಲಕರಾಗಿದ್ದ ದಿ. ಜೆ.ಆರ್ ಪೈ ಅವರ ಪುತ್ರ ಹರ್ಷೇಂದ್ರ ಪೈ ಮನೆಯವರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 12 ಹಲಸಿನ ಮಣೆಗಳನ್ನು ಸಮರ್ಪಣೆ ಮಾಡಿದರು.


ಬೆಳಿಗ್ಗೆ ದೇವಳದ ಸತ್ಯಧರ್ಮ ನಡೆಯಲ್ಲಿ ಹಷೇಂದ್ರ ಪೈ ಅವರ ಪತ್ನಿ ರಚನಾ ಪೈ ಮತ್ತು ತಾಯಿ ರೂಪಾ ಪೈ ಅವರು ಮಣೆಗಳನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಮಣೆಯ ಕೆಲಸ ಕಾರ್ಯ ನಿರ್ವಹಿಸಿದ ಕಾಷ್ಟ ಶಿಲ್ಪಿ ಗಣೇಶ್ ಆಚಾರ್ಯ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಪ್ರಧಾನ ಅರ್ಚಕ ವೇ ಮೂ ವಿ.ಎಸ್, ಲೋಕೇಶ್ ಪಡ್ಡಾಯೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here