ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ವಲಯ ಮಟ್ಟದ ಕ್ರೀಡಾ ಸಮಿತಿ ವತಿಯಿಂದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪುತ್ತೂರು ನಗರ ವಲಯ ಮಟ್ಟದ ಕ್ರೀಡಾಕೂಟ 14/17 ರ ವಯೋಮನದ ವಿಭಾಗದಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ 8ನೇ ತರಗತಿಯ ಮಾನ್ವಿ ಡಿಸೋಜ (ಮಾರ್ಟಿನ್ ಡಿಸೋಜಾ ಮತ್ತು ಶಾಂತಿ ಡಿಸೋಜರವರ ಪುತ್ರಿ) ಎತ್ತರ ಜಿಗಿತದಲ್ಲಿ ಪ್ರಥಮ, 10ನೇ ತರಗತಿಯ ಪಾತಿಮತ್ ಶಹೀದ (ಜಮೀಲ ರವರ ಪುತ್ರಿ) ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಮತ್ತು ಚಕ್ರ ಎಸೆತ ತೃತೀಯ ಸ್ಥಾನ ಹಾಗೂ 9ನೇ ತರಗತಿಯ ಎಂ. ಅನುಷ್ಕಾ ಆರ್. (ರಾಜು ಪೂಜಾರಿ ಮತ್ತು ವೇದಾವತಿ ರವರ ಪುತ್ರಿ) 3000 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಶಾಲಾ ಮುಖ್ಯ ಶಿಕ್ಷಕಿ ರೋಸಲಿನ್ ಲೋಬೋರವರ ಮಾರ್ಗದರ್ಶನದಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ದೀಕ್ಷಾ ಪಿ.ಎನ್ ತರಬೇತಿ ನೀಡಿರುತ್ತಾರೆ.
